ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆ, ವಿಶೇಷತೆ ಏನು?

|
Google Oneindia Kannada News

ಮೈಸೂರು, ಜನವರಿ 26 : ಗಣ್ಯರ ಮೇಲೆ ನಡೆದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕಮಾಂಡೊ ಪಡೆ, ಕೊನೆಗೂ ಉಗ್ರರನ್ನು ಹೊಡೆದುರುಳಿಸಿತು.

ಇಂಥದೊಂದು ರೋಮಾಂಚಕ ದೃಶ್ಯ ನಗರದ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ನಡೆಯಿತು. ಆದರೆ, ಅದು ಅಣುಕು ಪ್ರದರ್ಶನ. ಗಣರಾಜ್ಯೋತ್ಸವ ಅಂಗವಾಗಿ ಕಮಾಂಡೊ ಪಡೆಯ ಮುಖ್ಯಸ್ಥ ಅಶೋಕಕುಮಾರ್‌ ನೇತೃತ್ವದಲ್ಲಿ ಅಣಕು ಕಾರ್ಯಾಚರಣೆ ಗಮನ ಸೆಳೆಯಿತು. ಈ ಮೂಲಕ 4 ತಿಂಗಳವರೆಗೆ ಪಡೆದ ತರಬೇತಿಯ ನಂತರ ಮೊದಲ ಬಾರಿಗೆ ಪಡೆಯ ಪೊಲೀಸರು ತಮ್ಮ ಕೌಶಲ ಮೆರೆದರು.

70 ನೇ ಗಣರಾಜ್ಯೋತ್ಸವಕ್ಕೆ ಸಂಭ್ರಮದ ಸಮಾರೋಪ 70 ನೇ ಗಣರಾಜ್ಯೋತ್ಸವಕ್ಕೆ ಸಂಭ್ರಮದ ಸಮಾರೋಪ

ಮೊದಲಿಗೆ ಆಯುಧ ಕೌಶಲ ಸ್ಪರ್ಧೆ ನಡೆಯಿತು. ಒಂದೇ ಕೈಯಿಂದ ಆಯುಧ ಬಿಚ್ಚಿದ ಪೊಲೀಸ್‌ ಪಡೆ ನಂತರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಿಚ್ಚಿದ ಆಯುಧಗಳನ್ನು ಜೋಡಿಸಿದರು. ಆಮೇಲೆ ಸುಸಜ್ಜಿತ ವಾಹನದಲ್ಲಿ ಬಂದ ಗಣ್ಯರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಉಗ್ರರು ದಾಳಿ ನಡೆಸುತ್ತಾರೆ.

70th republic day celebrated in Mysuru

ಇದರೊಂದಿಗೆ ಗಣ್ಯರ ಮೇಲೆ ಬಾಂಬ್‌ ಎಸೆಯಲು ಯತ್ನಿಸುವ ಉಗ್ರರ ಪ್ರಯತ್ನವನ್ನು ಸಮರ್ಥವಾಗಿ ಎದುರಿಸಿದ ಪಡೆ ಗಣ್ಯರನ್ನು ಸುರಕ್ಷಿತವಾಗಿ ಅವರ ವಾಹನ ಹತ್ತಿಸುವ ಮೂಲಕ ಬೀಳ್ಕೊಟ್ಟಿತು. ಆಗ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಪ್ರೋತ್ಸಾಹಿಸಿದರು.

ಮನೆಯೊಳಗೆ ನುಗ್ಗಿದ ಉಗ್ರರ ಮೇಲೆ ಏಕಾಏಕಿ ದಾಳಿ ನಡೆಸದೆ ಮನೆಯನ್ನು ಮೊದಲು ಸುತ್ತುವರಿಯಿತು ಕಮಾಂಡೊ ಪಡೆ. ಇವರಿಗೆ ನೆರವಾಗಲು ಬಂದಿದ್ದು 'ಮೊಬೈಲ್‌ ಕಮಾಂಡ್ ಸೆಂಟರ್‌' ವಾಹನ. ಇದರಲ್ಲಿ ಡ್ರೋಣ್ ಕ್ಯಾಮೆರಾ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಮತ್ತೊಂದಿಷ್ಟು ಪಡೆ ಬಂದಿಳಿಯಿತು.

ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಸಲ್ಲದು: ಯು ಟಿ ಖಾದರ್ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಸಲ್ಲದು: ಯು ಟಿ ಖಾದರ್

ಹಂತ ಹಂತವಾಗಿ ಮನೆಯೊಳಗೆ ನುಗ್ಗಿದ ಪಡೆ ಉಗ್ರರನ್ನು ಸೆದೆಬಡಿಯಿತು. ಹತ್ಯೆಯಾದ ಉಗ್ರರಿಂದ ವಶಪಡಿಸಿಕೊಂಡ ಆಯುಧಗಳನ್ನು ತಮ್ಮ ನಾಯಕರಿಗೆ ಸಿಬ್ಬಂದಿ ಒಪ್ಪಿಸಿತು.

70th republic day celebrated in Mysuru

ಇದೇ ಮೋದಲ ಬಾರಿಗೆ ಭಾರತೀಯ ಚುನಾವಣಾ ಆಯೋಗದಿಂದ ವಿಶೇಷ ಸ್ಥಬ್ದ ಚಿತ್ರ ಪ್ರದರ್ಶನಗೊಂಡಿತ್ತು. ವಿಶೇಷ ಸ್ಥಬ್ದ ಚಿತ್ರದ ಮೂಲಕ ಮತದಾರರಿಗೆ ಮತದಾನದ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಮುಂದಾಗಿದೆ. ಸ್ತಬ್ಧ ಚಿತ್ರಕ್ಕೂ ಮುನ್ನ ಶಾಲಾ ಮಕ್ಕಳಿಂದ ಮತದಾನ ಜಾಗೃತಿ ಮೂಡಿಸುವ ಬೋರ್ಡ್ ಹಿಡಿದು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು

ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ ಧ್ವಜಾರೋಹಣ ನೆರವೇರಿಸಿದ ನಂತರ ತೆರೆದ ಜೀಪಿನಲ್ಲಿ ಪರೇಡ್‌ ವೀಕ್ಷಿಸಿದರು.

English summary
70th republic day flag hoisted in Mysuru by minister g t devegowda. Some cultural program did by students and commandos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X