ಸಂತ್ರಸ್ತರಿಗೆ ಪಾಲಿಕೆ ಸದಸ್ಯರಿಂದ 6.50 ಲಕ್ಷ ನೀಡಲು ನಿರ್ಧಾರ
ಮೈಸೂರು, ಆಗಸ್ಟ್ 14 : ಪ್ರವಾಹದಲ್ಲಿ ನಲುಗುತ್ತಿರುವ ನಿರಾಶ್ರಿತರ ನೆರವಿಗೆ ಮೈಸೂರು ನಾಗರೀಕರು, ಸಂಘ ಸಂಸ್ಥೆ, ಮಠ -ಮಾನ್ಯಗಳು ಈಗಾಗಲೇ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದು, ಮೈಸೂರಿನ ಮಹಾನಗರ ಪಾಲಿಕೆ ಸದಸ್ಯರು ಸಹ ತಮ್ಮ ಅಳಿಲು ಸೇವೆಗೆ ಮುಂದಡಿಯಿಟ್ಟಿದ್ದಾರೆ.
ಮತ್ತೆ
ಕುಮಾರಣ್ಣನ
ಔದಾರ್ಯ:
ಸಂತ್ರಸ್ತರಿಗೆ
ಮಧುರೈಯಿಂದ
10
ಸಾವಿರ
ಬೆಡ್
ಮೈಸೂರು
ಮಹಾನಗರ
ಪಾಲಿಕೆ
ಸದಸ್ಯರು
ತಲಾ
10
ಸಾವಿರ
ರೂಗಳಂತೆ
6.50
ಲಕ್ಷ
ರೂಗಳನ್ನು
ದೇಣಿಗೆ
ನೀಡಲು
ನಿರ್ಧರಿಸಿದ್ದು,
ಆಗಸ್ಟ್
16ರಂದು
ಸಾರ್ವಜನಿಕರಿಂದ
ದೇಣಿಗೆ
ಸಂಗ್ರಹಿಸಲು
ಕೂಡ
ನಿರ್ಧರಿಸಿದ್ದಾರೆ.
ಮಹಾಪೌರರಾದ ಪುಷ್ಪಲತಾ ಜಗನ್ನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 10 ಸಾವಿರ ದೇಣಿಗೆ ನೀಡಲು ಸದಸ್ಯರು ಒಮ್ಮತದ ನಿರ್ಧಾರಕ್ಕೆ ಬಂದರು. ತಮ್ಮ ಹಣದ ಜೊತೆ ಸಾರ್ವಜನಿಕರಿಂದಲೂ ದೇಣಿಗೆ ಸಂಗ್ರಹಿಸಲು ಮುಂದಾಗಿರುವ ಸದಸ್ಯರು 65 ಜನರ ಮೂರು ತಂಡಗಳಾಗಿ ನಗರದ ಸಂತೇಪೇಟೆ, ದೇವರಾಜ ಅರಸ್ ರಸ್ತೆ, ಮಾರುಕಟ್ಟೆ, ಸಯ್ಯಾಜಿರಾವ್ ರಸ್ತೆ ಹೀಗೆ ಇನ್ನಿತರ ಪ್ರಮುಖ ರಸ್ತೆಗಳು ಹಾಗೂ ಗಣ್ಯ ವ್ಯಕ್ತಿಗಳ ಬಳಿಗೆ ತೆರಳಿ ಹಣ ಸಂಗ್ರಹಿಸಲು ತೀರ್ಮಾನ ಕೈಗೊಂಡರು.