ಚಿತ್ರಗಳು : ಮತ ಹಾಕಿ, ಗೆಲುವು ನಮ್ಮದು ಎಂದ ಸಿದ್ದರಾಮಯ್ಯ
ಮೈಸೂರು, ಫೆಬ್ರವರಿ 20 : ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾನ ಮಾಡಿದರು. 'ಬಹುತೇಕ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ
ಮಧ್ಯಾಹ್ನ
ಸ್ವಗ್ರಾಮ
ಸಿದ್ದರಾಮನಹುಂಡಿಯ
ಮತಗಟ್ಟೆ
ಕೇಂದ್ರ
329ಕ್ಕೆ
ಆಗಮಿಸಿ
ಸಿದ್ದರಾಮಯ್ಯ
ಅವರು,
ತಮ್ಮ
ಹಕ್ಕು
ಚಲಾಯಿಸಿದರು.
ಬಳಿಕ
ಮಾತನಾಡಿದ
ಅವರು,
'ಬಹುತೇಕ
ಜಿಲ್ಲೆಗಳಲ್ಲಿ
ಕಾಂಗ್ರೆಸ್
ಅಧಿಕಾರ
ಹಿಡಿಯಲಿದೆ.
ಎಲ್ಲೆಡೆ
ಉತ್ತಮ
ಪ್ರತಿಕ್ರಿಯೆ
ವ್ಯಕ್ತವಾಗುತ್ತಿದೆ'
ಎಂದರು.
[ಜಿಲ್ಲಾ
ಮತ್ತು
ತಾಲೂಕು
ಪಂಚಾಯಿತಿ
ಚುನಾವಣೆ
:
ಕ್ಷಣ-ಕ್ಷಣದ
ಮಾಹಿತಿ]
'ಕಾಂಗ್ರೆಸ್
ಸರ್ಕಾರ
ಸಾವಿರ
ದಿನಗಳನ್ನು
ಪೂರೈಸಿದೆ.
ಸರ್ಕಾರದ
ಬಗ್ಗೆ
ಜನರಲ್ಲಿ
ಯಾವ
ರೀತಿಯ
ಅಭಿಪ್ರಾಯವಿದೆ?
ಎಂಬುದು
ಈ
ಚುನಾವಣೆಯಲ್ಲಿ
ತಿಳಿಯಲಿದೆ
ಎಂದು
ಹೇಳಿದ
ಸಿದ್ದರಾಮಯ್ಯ
ಅವರು,
ವಿಧಾನಸಭೆ
ಉಪ
ಚುನಾವಣೆಗಳ
ಫಳಿತಾಂಶ
ಸ್ಥಳೀಯ
ಸಂಸ್ಥೆಗಳ
ಚುನಾವಣೆ
ಮೇಲೆ
ಯಾವುದೇ
ಪರಿಣಾಮ
ಬೀರುವುದಿಲ್ಲ'
ಎಂದು
ಸ್ಪಷ್ಟಪಡಿಸಿದರು.
[ಸಿಎಂಗೆ
ತವರು
ಕ್ಷೇತ್ರ
ಮೈಸೂರಿನಲ್ಲಿ
ಗೆಲುವು
ಅನಿವಾರ್ಯ]
ಉಪಚುನಾವಣೆ
ಬೇರೆ
:
ಹೆಬ್ಬಾಳ,
ದೇವದುರ್ಗ
ಮತ್ತು
ಬೀದರ್
ಕ್ಷೇತ್ರಗಳ
ಉಪ
ಚುನಾವಣೆ
ಹಿನ್ನಡೆ
ಬಗ್ಗೆ
ಕೇಳಿದ
ಪ್ರಶ್ನೆಗೆ
ಉತ್ತರ
ನೀಡಿದ
ಮುಖ್ಯಮಂತ್ರಿಗಳು,
'ವಿಧಾನಸಭೆ
ಉಪಚುನಾವಣೆಯೇ
ಬೇರೆ,
ಸ್ಥಳೀಯ
ಸಂಸ್ಥೆಗಳ
ಚುನಾವಣೆಯೇ
ಬೇರೆ'
ಎಂದು
ಹೇಳಿದರು.
[ಹೆಬ್ಬಾಳ
ಚುನಾವಣೆ
ಕಾಂಗ್ರೆಸ್
ನಾಯಕರಿಗೆ
ಕಲಿಸಿದ್ದೇನು?]
ಮತಗಟ್ಟೆಯಲ್ಲಿ ಹಾವು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾನ ಮಾಡಲು ಆಗಮಿಸುವುದಕ್ಕೂ ಮೊದಲು ಮತಗಟ್ಟೆ ಬಳಿ ಹಾವು ಬಂದಿತ್ತು. ಅಲ್ಲಿದ್ದ ಸ್ಥಳೀಯರು ಅದನ್ನು ಬಡಿದು ಕೊಂದು ಹಾಕಿದರು.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯ ಎರಡು ಹಂತಗಳ ಮತದಾನ ಪೂರ್ಣಗೊಂಡಿದ್ದು, ಫೆ.23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.