ಅನೈತಿಕ ಸಂಬಂಧ: ಮೈಸೂರಿನಲ್ಲಿ ಪತಿಯನ್ನೇ ಕೊಲ್ಲಲು ಯತ್ನಿಸಿದ ಪತ್ನಿ
ಮೈಸೂರು, ಜನವರಿ 9: ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ಪತ್ನಿ ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಪರಿಣಾಮ ಪತಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಮೈಸೂರಿನ ಉದಯಗಿರಿಯ ಸತ್ಯನಗರದಲ್ಲಿ ನಡೆದಿದೆ.
ಗಂಡು ಮಕ್ಕಳಿಲ್ಲವೆಂದು ಹೆಂಡತಿಯನ್ನು ಕತ್ತು ಹಿಸುಕಿ ಕೊಂದ ಪಾಪಿ ಪತಿ
ಗಾಯಗೊಂಡ ಪತಿ ಮಹಜರ್ ಪಾಷಾ(45) ನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ಮಮ್ತಾಜ್(44)ಳನ್ನು ಪೊಲೀಸರು ಬಂಧಿಸಿದ್ದಾರೆ. ಮಮ್ತಾಜ್ ಹಾಗೂ ಮಹಜರ್ ಪಾಷಾ ಮದುವೆಯಾಗಿ 23 ವರ್ಷಗಳಾಗಿದ್ದು, 6 ಮಕ್ಕಳನ್ನು ಹೊಂದಿದ್ದರು. ಮಹಜರ್ ಪಾಷ ಆಟೋ ಡ್ರೈವರ್ ಆಗಿದ್ದ.
ಲಿವಿಂಗ್ ಟುಗೆದರ್ ನಲ್ಲಿದ್ದ ಅರುಣಾಚಲ ವಿದ್ಯಾರ್ಥಿನಿ ಮೈಸೂರಿನಲ್ಲಿ ಆತ್ಮಹತ್ಯೆ
ಗಂಡನ ಅನೈತಿಕ ಸಂಬಂಧದ ಬಗ್ಗೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ರಾತ್ರಿ ಮಲಗಿದ್ದ ವೇಳೆ ಮಹಜರ್ ಪಾಷಾ ಮೇಲೆ ಮುಮ್ತಾಜ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಕೆ.ಆರ್.ಆಸ್ಪತ್ರೆಯ ಬರ್ನ್ಸ್ ವಾರ್ಡ್ ನಲ್ಲಿ ಮಹಜರ್ ಪಾಷಾ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿ
ಮೇಲೆ
ಅತ್ಯಾಚಾರವೆಸಗಿದ
ವ್ಯಕ್ತಿಗೆ
ಶಿಕ್ಷೆ
ಮತ್ತೊಂದು
ಪ್ರಕರಣದಲ್ಲಿ
ಎಂಟು
ವರ್ಷದ
ಬಾಲಕಿಯೋರ್ವಳ
ಮೇಲೆ
ಅತ್ಯಾಚಾರವೆಸಗಿದ್ದ
ವ್ಯಕ್ತಿಯೋರ್ವನಿಗೆ
ಇಲ್ಲಿನ
ಪೋಕ್ಸೋ
ವಿಶೇಷ
ನ್ಯಾಯಾಲಯವು
ಹತ್ತು
ವರ್ಷಗಳ
ಕಠಿಣ
ಜೈಲು
ಶಿಕ್ಷೆ
ಹಾಗೂ
ಐದು
ಸಾವಿರ
ರೂ.ದಂಡ
ವಿಧಿಸಿದೆ.
ಮೈಸೂರು ತಾಲೂಕಿನ ಗ್ರಾಮವೊಂದರಲ್ಲಿ 2016ರ ಜನವರಿ 1ರಂದು ಬಾಲಕಿಯು ತಿಪ್ಪೆಗೆ ಕಸ ಸುರಿಯಲು ಹೋದ ವೇಳೆ ಪಕ್ಕದ ಹಿತ್ತಲಿಗೆ ಎಳೆದುಕೊಂಡು ಹೋದ ವ್ಯಕ್ತಿ ಅತ್ಯಾಚಾರವೆಸಗಿದ್ದ.
ಅಪಾರ್ಟ್ಮೆಂಟ್ ಬಾಲ್ಕನಿಯಿಂದ ಜಿಗಿದು ಏಮ್ಸ್ ವೈದ್ಯ ಆತ್ಮಹತ್ಯೆ
ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಆರೋಪಿಗೆ ಹತ್ತು ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು ಐದು ಸಾವಿರ ರೂ.ದಂಡ ವಿಧಿಸಿದ್ದಾರೆ. ಸಂತ್ರಸ್ತ ಪರಿಹಾರ ನಿಧಿಯಿಂದ ಬಾಲಕಿಗೆ ರೂ.3ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.