ಚಿತ್ರಗಳು : ಹುಣಸೂರಿನಲ್ಲಿ ಕಾಡಾನೆಗಳ ಪರೇಡ್, ಜನರಲ್ಲಿ ಆತಂಕ
ಮೈಸೂರು, ಮಾರ್ಚ್ 29 : ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ನೀರು ಮತ್ತು ಮೇವು ಅರಸಿ ಬಂದ ಕಾಡಾನೆ ಹಿಂಡು ಹುಣಸೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಪೆರೇಡ್ ನಡೆಸಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಸಿವೆ.
ಹುಣಸೂರಿನ
ಹನಗೋಡು
ಹೋಬಳಿಯ
ಕಚುವಿನಹಳ್ಳಿ
ಕೆರೆಯಲ್ಲಿ
8
ಕಾಡಾನೆಗಳು
ಬೀಡು
ಬಿಟ್ಟಿರುವುದನ್ನು
ಗ್ರಾಮಸ್ಥರು
ನೋಡಿದ್ದಾರೆ.
ಆನೆಗಳನ್ನು
ಕಂಡ
ನೂರಾರು
ಗ್ರಾಮಸ್ಥರು
ಕೆರೆಯ
ಸುತ್ತ-ಮುತ್ತ
ಸುತ್ತುವರಿದು
ಕೇಕೆ
ಹಾಕುತ್ತಾ,
ಶಿಳ್ಳೆ
ಹೊಡೆಯುತ್ತ
ಕಾಡಾನೆಗಳನ್ನು
ಕಾಡಿನತ್ತ
ಓಡಿಸಲು
ಪ್ರಯತ್ನಪಟ್ಟರು.
[555
ಹುದ್ದೆಗಳ
ಭರ್ತಿಗೆ
ಅರ್ಜಿ
ಆಹ್ವಾನಿಸಿದ
ಅರಣ್ಯ
ಇಲಾಖೆ]
ಇದರಿಂದ
ಗಾಬರಿಗೊಂಡ
ಆನೆಗಳು
ಕೆರೆಯ
ಸುತ್ತ
ಮುತ್ತ
ಅಲ್ಲಿಯೇ
ಗಿರಕಿ
ಹೊಡೆಯುತ್ತ
ಕೆಲ
ಸಮಯ
ಕಳೆದವು.
ಅಷ್ಟರಲ್ಲಿ
ಅರಣ್ಯ
ಇಲಾಖೆಯ
ಸಿಬ್ಬಂದಿಗಳು
ಕೆರೆ
ಬಳಿಗೆ
ಧಾವಿಸಿ
ಜನ
ಸಮೂಹವನ್ನು
ನಿಯಂತ್ರಿಸಿ
ಹತ್ತಾರು
ಬಾರಿ
ಗಾಳಿಯಲ್ಲಿ
ಗುಂಡು
ಹಾಗೂ
ಪಟಾಕಿ
ಸಿಡಿಸಿ
2
ಕಿ.ಮೀ.ದೂರದವರೆಗೆ
ಆನೆಗಳನ್ನು
ಓಡಿಸಲು
ಪ್ರಯತ್ನಿಸಿದರು.
[ಮಡಿಕೇರಿಯಲ್ಲಿ
ಕಾಡಾನೆ
ದಾಳಿಗೆ
ಮಹಿಳೆ
ಬಲಿ]
ಮಾರ್ಗ ಮಧ್ಯೆ ನೇರಳಕುಪ್ಪೆ ಗ್ರಾಮದ ಎ.ವಿ.ಬಾಲಕೃಷ್ಣರವರ ತೆಂಗಿನತೋಟದಲ್ಲಿ 5 ಹೆಣ್ಣಾನೆ 2 ಮರಿಯಾನೆ ಹಾಗೂ ಒಂದು ಸಲಗ ಸೇರಿದಂತೆ ಒಟ್ಟು 8 ಆನೆಗಳಿದ್ದವು, ಅವು ಮೂರು ಗುಂಪುಗಳಾಗಿ ಚದುರಿದವು. ಸಲಗವೊಂದು ನೇರಳಕುಪ್ಪೆಯ ಜವರಮ್ಮನ ಜಮೀನಿನಲ್ಲಿರುವ ಪಂಪ್ಸೆಟ್ ಹಾಗೂ ಮನೆಯನ್ನು ಧ್ವಂಸಗೊಳಿಸಿತು. [ಮೈಸೂರು ಮೃಗಾಲಯದ 'ಟಿಂಬೋ' ಇನ್ನಿಲ್ಲ]
ಆನೆಯೊಂದು
ಗಿರಿಜನರ
ಬಿ
ಹಾಡಿ
ಮೂಲಕ
ಕಾಡು
ಸೇರಿಕೊಂಡರೆ
ಹೆಣ್ಣಾನೆಯೊಂದು
ಎ.ವಿ.ಬಾಲಕೃಷ್ಣ
ಅವರ
ತೆಂಗಿನತೋಟದಲ್ಲಿ
ಬೀಡು
ಬಿಟ್ಟಿತು.
ಅಲ್ಲಿದ್ದ
ದನದ
ಕೊಟ್ಟಿಗೆಯನ್ನು
ಧ್ವಂಸಗೊಳಿಸಿ
ಆತಂಕ
ಸೃಷ್ಠಿಸಿತು.
ತೆಂಗಿನತೋಟದಲ್ಲಿ ಬೀಡು ಬಿಟ್ಟ ಹೆಣ್ಣಾನೆಯು ಸುಮಾರು 1 ಗಂಟೆ ಕಾಲ ಹೊರ ಬಾರದೆ ಆತಂಕ ಉಂಟು ಮಾಡಿತು. ಈ ಹಿನ್ನಲೆಯಲ್ಲಿ ಎಸಿಎಫ್ ಶ್ರೀಪತಿ ಅವರು ಸಾಕಾನೆಗಳಾದ ಬಲರಾಮ ಹಾಗೂ ಗೋಪಾಲಸ್ವಾಮಿಯನ್ನು ಕರೆತಂದು ತೋಟದಿಂದ ಹೊರ ಹಾಕಿ ನೇರಳಕುಪ್ಪೆ ಸಿದ್ದಯ್ಯನಕೆರೆಗೆ ಸೇರಿಸಿದರು. ಬಳಿಕ ಕಾಡಿನತ್ತ ಅಟ್ಟುವ ಕಾರ್ಯ ನಡೆಯಿತು.