ಅಪನಗದೀಕರಣದಿಂದ ಜ್ಞಾನವನ್ನು ಅಲುಗಾಡಿಸಲಾಗದು: ಸಿಎಂ
ಮೈಸೂರು,ಡಿಸೆಂಬರ್ 23: ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಮತ್ತು ಜ್ಞಾನದಲ್ಲಿ ಹೂಡಿಕೆ ಮಾಡುವುದು ಒಳಿತು.ಏಕೆಂದರೆ ಅಪನಗದೀಕರಣದಿಂದ ಜ್ಞಾನ ಮತ್ತು ವಿಚಾರಗಳನ್ನು ಅಲುಗಾಡಿಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯ ಶತಮಾನೋತ್ಸವದ ಅಂಗವಾಗಿ 5 ಮತ್ತು 100ರೂ ಮುಖಬೆಲೆಯ ನಾಣ್ಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನಿಶ್ಚಿತತೆ, ದುರ್ಬಲ ಆರ್ಥಿಕತೆ ಮತ್ತು ನೋಟು ಅಮಾನ್ಯತೆಯ ಈ ದಿನಗಳಲ್ಲಿ ಭವಿಷ್ಯದ ಯೋಜನೆಗಳ ಬಗೆಗೆ ಯಾವಾಗಲೂ ಶಂಕೆ ಮತ್ತು ಅನುಮಾನಗಳು ಇರುತ್ತವೆ ಎಂದರು.[ನೋಟು ನಿಷೇದ ಕೇಂದ್ರಕ್ಕೆ ಸಿಎಂ ಮತ್ತೊಂದು ಪತ್ರ]
ಈ ಸನ್ನಿವೇಶದಲ್ಲಿ ಶಿಕ್ಷಣ ಮತ್ತು ಜ್ಞಾನದಲ್ಲಿ ಹೂಡಿಕೆ ಮಾಡುವುದು ಉತ್ತಮ, ಯಾಕೆಂದರೆ ಯಾವುದೇ ನೋಟು ಬದಲಾವಣೆ ನಿಮ್ಮ ಜ್ಞಾನ ಮತ್ತು ವಿಚಾರಗಳನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಅದು ಅಕ್ಷಯ ಪಾತ್ರೆಯಂತೆ ಜೀವನ ಪೂರ್ತಿ ಉತ್ಪನ್ನ ನೀಡುವ ಎಟಿಎಂ ಆಗಿ ಮುಂದುವರೆಯುತ್ತದೆ ಎಂದು ಹೇಳಿದರು.
ಈ ಹಿಂದೆ ಅಪನಗದೀಕರಣದಿಂದಾಗಿ ಆಗಿರುವ ಅನಾಹುತಗಳ ಬಗ್ಗೆ ಬೆಳಗಾವಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ರಾಹುಲ್ ಭಾಷಣಕ್ಕೂ ಮುಂಚೆ ಮೋದಿಯವರ ವಿರುದ್ಧ ವಾಗ್ದಾಳಿ