ಮೈಸೂರು : ಹುಲಿದಾಳಿಗೆ ಕುರಿಗಾಹಿ ಬಲಿ
ಮೈಸೂರು, ಡಿ. 5 : ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿ ಹುಲಿ ದಾಳಿಗೆ ಕುರಿಗಾಹಿಯೊಬ್ಬ ಬಲಿಯಾಗಿದ್ದಾನೆ. ಮೇಟಿಕುಪ್ಪ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ವ್ಯಕ್ತಿಯ ಶವ ಪತ್ತೆಯಾಗಿದ್ದು, ಹುಲಿ ಆತನನ್ನು ಕೊಂದು ಹಾಕಿದೆ.
ಹುಲಿ
ದಾಳಿಗೆ
ಬಲಿಯಾದ
ವ್ಯಕ್ತಿಯನ್ನು
ಸೊಳ್ಳೆಪುರ
ಹಾಡಿಯ
ಮುನಿನಾಯ್ಕ್
(30)
ಎಂದು
ಗುರುತಿಸಲಾಗಿದೆ.
20
ದಿನಗಳ
ಹಿಂದೆ
ಕುರಿಗಳನ್ನು
ಮೇಯಿಸಲು
ಹೋಗಿದ್ದ
ಮುನಿನಾಯ್ಕ್
ಕಾಣೆಯಾಗಿದ್ದ.
ಎರಡು
ದಿನ
ಆತನನ್ನು
ಹುಡುಕಿದ
ಗ್ರಾಮಸ್ಥರು,
ಪ್ರಾಣಿಗೆ
ಬಲಿಯಾಗಿರಬಹುದೆಂದು
ಶಂಕಿಸಿದ್ದರು.
ಶುಕ್ರವಾರ ಬೆಳಗ್ಗೆ ಬಂಡೀಪುರ ಹುಲಿ ರಕ್ಷಿತಾರಣ್ಯಕ್ಕೆ ಸಮೀಪವಿರುವ ಮೇಟಿಕುಪ್ಪ ಕಾಡಿನಲ್ಲಿ ಗ್ರಾಮಸ್ಥರಿಗೆ ರುಂಡ ಮತ್ತು ಮುಂಡ ಬೇರೆಯಾಗಿರುವ ಮೃತದೇಹ ಪತ್ತೆಯಾಗಿದೆ. ಭುಜ, ಹೊಟ್ಟೆಯ ಭಾಗವನ್ನು ಹುಲಿ ತಿಂದು ಹಾಕಿದ್ದು, ಇದು ಮುನಿನಾಯ್ಕ್ ಶವ ಎಂದು ಹಾಡಿಯ ಜನ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. [ಮತ್ತೆ ಕರಡಿ ದಾಳಿ : ಹಾಸನದಲ್ಲಿ ರೈತ ಬಲಿ]
ಮೇಟಿಕುಪ್ಪ ಕಾಡಿನ ಅಂಚಿನಲ್ಲಿ ಹುಲಿ ಇರಬಹುದು ಎಂದು ಹಾಡಿಯ ಜನರು ಆತಂಕಗೊಂಡಿದ್ದು, ಹುಲಿಯನ್ನು ಸೆರೆ ಹಿಡಿಯಿರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಡಿಯ ಜನರು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದರು, ಪರಿಶೀಲನೆ ಮುಂದುವರೆದಿದೆ.[ಮೈಸೂರಿನಲ್ಲಿ ಅಮೃತ, ಶಿವನನ್ನು ನೋಡಿ ಬನ್ನಿ]
ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಹುಲಿ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದರು. ನಂತರ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. [ಚಿಕ್ಕಮಗಳೂರು : ಹುಲಿ ದಾಳಿಗೆ ಮಹಿಳೆ ಬಲಿ]
ಇತ್ತೀಚೆಗೆ ಪ್ರಾಣಿಗಳ ದಾಳಿಗೆ ಬಲಿಯಾದವರು
*
ನ.15ರಂದು
ಚಿಕ್ಕಮಗಳೂರಿನಲ್ಲಿ
ಹುಲಿ
ಮಹಿಳೆಯೊಬ್ಬರ
ಮೇಲೆ
ದಾಳಿ
ಮಾಡಿ
ಕೊಂದು
ಹಾಕಿತ್ತು.
*
ನ.18ರಂದು
ಮಧುಗಿರಿ
ತಾಲೂಕಿನಲ್ಲಿ
ರೈತರ
ಮೇಲೆ
ಕರಡಿ
ದಾಳಿ
ಮಾಡಿ
ಒಬ್ಬರನ್ನು
ಕೊಂದು
ಹಾಕಿತ್ತು.
*
ನ.27ರಂದು
ಚಾಮರಾಜನಗರದಲ್ಲಿ
ಚಿರತೆ
ದಾಳಿಗೆ
ಟೆಂಪೋ
ಕ್ಲೀನರ್
ಬಲಿಯಾಗಿದ್ದ.