ಸಾಹಿತ್ಯ ಸಮ್ಮೇಳನದಲ್ಲಿ ಕಳ್ಳರ ಕೈಚಳಕ
ಮೈಸೂರು, ನವೆಂಬರ್ 25 : ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನದ ಸಾರ್ವಜನಿಕ ಊಟದ ಆವರಣದಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಚನ್ನರಾಯಪಟ್ಟಣದ ರವಿ ಕುಮಾರ್ ಎಂಬುವರ ಬಳಿ ಇದ್ದ 90 ಸಾವಿರ ಹಾಗೂ ಚಿನ್ನದ ಸರವನ್ನು ಚೋರರು ದೋಚಿದ್ದಾರೆ ಎನ್ನಲಾಗುತ್ತಿದೆ. ಜತೆಗೆ ಎರಡು ಎಟಿಎಂ ಕಾರ್ಡ್ ಗಳನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.
ರವಿಕುಮಾರ್ ಊಟಕ್ಕಾಗಿ ಕ್ಯೂನಲ್ಲಿ ನಿಂತಿದ್ದರು. ಈ ವೇಳೆ ಯಾರೋ ಕಳ್ಳರು ರವಿ ಬಳಿ ಇದ್ದ 90 ಸಾವಿರ ನಗದು ಹಾಗೂ ಚಿನ್ನದ ಸರವನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಅಪಾರ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದು, ಈ ವೇಳೆ ರವಿ ಕುಮಾರ್ ಅವರ ಜೇಬಿಗೆ ಕತ್ತರಿ ಬಿದ್ದಿದೆ.
Comments
English summary
9 Thousand rs and Gold Chain has been snached from a literature lover at mysuru kannada literation festival
Story first published: Saturday, November 25, 2017, 10:10 [IST]