ಸರಳವಾಗಿ ಮೈಸೂರು ದಸರಾ ಆಚರಣೆ : ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್ 10 : ಈ ಬಾರಿಯ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದಸರಾ ಆಚರಣೆ ಕುರಿತು ಪ್ರತಿಪಕ್ಷ, ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಅಭಿಪ್ರಾಯ ಪಡೆಯಲಾಗುತ್ತದೆ ಎಂದು ಅವರು ತಿಳಿಸಿದರು.
ಸೋಮವಾರ
ವಿಧಾನಸೌಧದಲ್ಲಿ
2015ನೇ
ಸಾಲಿನ
ದಸರಾ
ಪೂರ್ವ
ಸಿದ್ಧತೆಗಳ
ಕುರಿತು
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅಧ್ಯಕ್ಷತೆಯಲ್ಲಿ
ಉನ್ನತ
ಮಟ್ಟದ
ಸಭೆ
ನಡೆಯಿತು.
ಸಭೆಯಲ್ಲಿ
ಸರಗಳವಾಗಿ
ದಸರಾವನ್ನು
ಆಚರಣೆ
ಮಾಡಲು
ನಿರ್ಧಾರ
ಕೈಗೊಳ್ಳಲಾಯಿತು.
[ದಸರಾಕ್ಕೆ
ಬರುವ
12
ಆನೆಗಳ
ಪಟ್ಟಿ]
ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ರಾಜ್ಯದಲ್ಲಿನ ಬರಗಾಲ, ರೈತ ಆತ್ಮಹತ್ಯೆಯ ಹಿನ್ನಲೆಯಲ್ಲಿ ಸರಳವಾಗಿ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ' ಎಂದು ಹೇಳಿದರು. [ಅಂಬಾರಿ ಹೊರುವ ಜವಾಬ್ದಾರಿ ಅರ್ಜುನನಿಗೆ]
'ಯಾವುದೇ ಅದ್ದೂರಿ, ಆಡಂಬರಗಳಿಲ್ಲದೇ ದಸರಾವನ್ನು ಆಚರಣೆ ಮಾಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿಯೂ ವ್ಯಕ್ತವಾಗಿದೆ. ಸಾಂಪ್ರಾದಾಯಿಕ ಆಚರಣೆಗಳಿಗೆ ಯಾವುದೇ ಧಕ್ಕೆ ಬರದಂತೆ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತದೆ' ಎಂದು ಸಿದ್ದರಾಮಯ್ಯ ತಿಳಿಸಿದರು.
'ದಸರಾ
ಆಚರಣೆ
ಕುರಿತು
ಸಲಹೆ
ಪಡೆಯಲು
ಪ್ರತಿಪಕ್ಷಗಳು,
ರೈತ
ಸಂಘಟನೆಗಳು
ಸೇರಿದಂತೆ
ವಿವಿಧ
ಸಂಘಟನೆಗಳ
ಜೊತೆ
ಸಭೆ
ನಡೆಸಲಾಗುತ್ತದೆ.
ಸಭೆಯ
ಬಳಿಕ
ಹೇಗೆ
ದಸರಾ
ಆಚರಣೆ
ಮಾಡಬೇಕು?
ಎಂಬ
ತೀರ್ಮಾನ
ಕೈಗೊಳ್ಳಲಾಗುತ್ತದೆ'
ಎಂದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ಸಚಿವರಾದ ಆರ್.ವಿ.ದೇಶಪಾಂಡೆ, ಎಚ್.ಸಿ.ಮಹದೇವಪ್ಪ, ಎಚ್.ಎಸ್.ಮಹದೇವಪ್ರಸಾದ್, ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.