ಮೈಸೂರು: ವಿಜ್ಞಾನ ಲೇಖಕ ಜೆ.ಆರ್. ಲಕ್ಷ್ಮಣರಾವ್ ವಿಧಿವಶ
ಮೈಸೂರು, ಡಿಸೆಂಬರ್ 29: ಕನ್ನಡದ ಖ್ಯಾತ ವಿಜ್ಞಾನ ಲೇಖಕರಲ್ಲೊಬ್ಬರಾದ ಜೆ.ಆರ್.ಲಕ್ಷ್ಮಣರಾವ್ (97) ಅವರು ಮೈಸೂರಿನ ತಮ್ಮ ಸ್ವಗೃಹದಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಮೈಸೂರು ವಿವಿಯಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ಬಹು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಲಕ್ಷ್ಮಣರಾವ್ ಅವರು 30ಕ್ಕೂ ಹೆಚ್ಚು ವಿಜ್ಞಾನ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ.
ವಿಜ್ಞಾನದ ಬೋಧನೆಯ ಜೊತೆಗೆ ವೈಜ್ಞಾನಿಕ ಲೇಖನಗಳನ್ನು ಬರೆಯುವುದನ್ನು ಆರಂಭಿಸಿದ ಅವರು ಬರೆದ ಮೊದಲ ಪುಸ್ತಕ 'ಆಹಾರ'. 'ಪರಮಾಣು ಚರಿತ್ರೆ', 'ಗೆಲಿಲಿಯೋ', 'ವಿಜ್ಞಾನವಿಚಾರ', 'ಲೂಯಿಪಾಸ್ತರ್', 'ವಿಜ್ಞಾನಿಗಳೊಡನೆ ರಸನಿಮಿಷಗಳು' ಅವರ ಪ್ರಮುಖ ಕೃತಿಗಳು. ಲಕ್ಷ್ಮಣರಾವ್ ಅವರಿಗೆ 2016ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು.
English summary
well known kannada science writer JR Lakhmana Rao is passed away in Mysuru today early morning.