ಮೈಸೂರಲ್ಲಿ ಬ್ಯಾಂಕ್ ಚಲನ್ ಹಿಂಭಾಗ ಕುರಾನ್ ಪಠ್ಯ, ಮುಸ್ಲಿಮರ ಆಕ್ರೋಶ
ಮೈಸೂರು, ಜೂನ್ 13: ಇಲ್ಲಿನ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ನಡೆದ ಅಚಾತುರ್ಯ ಭಾರೀ ಆತಂಕಕ್ಕೆ ಕಾರಣವಾಗಿ, ಬಿಗುವಿನ ಸನ್ನಿವೇಶ ನಿರ್ಮಾಣವಾಗಿತ್ತು. ಅಷ್ಟಕ್ಕೂ ಆಗಿದ್ದೇನು ಅಂತೀರಾ? ಬ್ಯಾಂಕ್ ಗಳಲ್ಲಿ ಬಳಸುವ ಚಲನ್ ನ ಹಿಂಭಾಗ ಕುರಾನ್ ನ ಮುದ್ರಣವಾಗಿತ್ತು. ಅದು ಅರೇಬಿಕ್ ಭಾಷೆಯಲ್ಲಿದ್ದದ್ದರಿಂದ ಬ್ಯಾಂಕ್ ಸಿಬ್ಬಂದಿಗೂ ಅದು ಏನು ಅಂತಲೇ ಗೊತ್ತಾಗಿಲ್ಲ.
ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್: ಯುವಕನ ಬಂಧನ
ಇದು ಗೊತ್ತಾಗಿ, ಆಕ್ರೋಶಗೊಂಡ ಮುಸ್ಲಿಮರು ಬ್ಯಾಂಕ್ ಮುಂದೆ ಸೇರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಚಲನ್ ನ ನಕಲು ಪ್ರತಿ ಮಾಡಿಕೊಟ್ಟಿದ್ದ ಅಶೋಕ ರಸ್ತೆಯ ಮಂಜು ಜೋನ್ ನ ನವೀನಕುಮಾರ್ ಎಂಬಾತನನ್ನು ಎನ್ ಆರ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ಶಿವಾಜಿ ರಸ್ತೆಯಲ್ಲಿರುವ ಬ್ಯಾಂಕ್ ನ ಚಲನ್ ಖಾಲಿಯಾಗಿತ್ತು. ಒಂದಷ್ಟು ಚಲನ್ ನಕಲು ಮಾಡುವಂತೆ ನವೀನಕುಮಾರ್ ಗೆ ಬ್ಯಾಂಕ್ ಅಧಿಕಾರಿಗಳೇ ಹೇಳಿದ್ದರು. ಒಂದು ಕಡೆ ಕುರಾನ್ ನ ಪಠ್ಯ ಪ್ರಕಟವಾಗಿದ್ದ ಕಾಗದವನ್ನು ಬಳಸಿ ಚಲನ್ ನ ಛಾಯಾಪ್ರತಿ ತಯಾರು ಮಾಡಲಾಗಿದೆ.
ಕುರಾನ್ ನಲ್ಲಿ 11ನೇ ವರ್ಷಕ್ಕೆ ಪದವಿ ಪಡೆದ ಸಚಿವ ಯು.ಟಿ ಖಾದರ್ ಪುತ್ರಿ!
ಇವುಗಳನ್ನು ಸೋಮವಾರ ಬ್ಯಾಂಕ್ ನಲ್ಲಿ ಕೂಡ ಇಡಲಾಗಿದೆ. ಇದನ್ನು ಗಮನಿಸಿದ ಮುಸ್ಲಿಂ ಯುವಕರ ಗುಂಪೊಂದು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದೆ. ಆ ವೇಳೆ, ತಮ್ಮದೇನೂ ತಪ್ಪಿಲ್ಲ ಎಂದು ಅಧಿಕಾರಿಗಳು ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದ್ದಾರೆ. ಆದರೆ ಈ ಸುದ್ದಿ ಹರಡಿ ಪರಿಸ್ಥಿತಿ ಕೈ ಮೀರಿತ್ತು. ಪೊಲೀಸರ ಮಧ್ಯಪ್ರವೇಶದಿಂದ ತಿಳಿಯಾಗಿದೆ.