ಕೇಂದ್ರ ಸರಕಾರದ ಧೋರಣೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಮೈಸೂರು, ಜೂನ್ 17 : ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಹಾಗೂ ಮಧ್ಯಪ್ರದೇಶದಲ್ಲಿನ ಬಿ.ಜೆ.ಪಿ. ಸರ್ಕಾರ ರೈತರ ಮೇಲಿನ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಮೈಸೂರು ಜಿಲ್ಲಾ ರೈತ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಮಧ್ಯಪ್ರದೇಶದಲ್ಲಿ ರೈತರ ಆಕ್ರೋಶ ಭುಗಿಲೆದ್ದಿರುವುದೇಕೆ?
ಮೈಸೂರಿನ ನಗರದ ಗಾಂಧೀ ವೃತ್ತದ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಆರ್.ಸುರೇಶ್ ಕುಮಾರ್ ಮಾತನಾಡಿ ಮಧ್ಯಪ್ರದೇಶದಲ್ಲಿ ರಾಜ್ಯದ ರೈತರು ತಾವು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯಬೇಕೆಂದು ಹಾಗೂ ರೈತರ ಕೃಷಿ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ನಡೆಸಿದ ರೈತರ ಹಕ್ಕೊತ್ತಾಯದ ಮುಷ್ಕರದ ಸಂದರ್ಭದಲ್ಲಿ ಭದ್ರತಾ ಪಡೆಯವರು ನಡೆಸಿದ ಗೋಲಿಬಾರ್ ನಲ್ಲಿ ಆರು ಜನ ರೈತರ ಬಲಿ ಪಡೆದಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ.
ಸರ್ಕಾರ
ಈ
ಕೂಡಲೇ
ರೈತರ
ಸಾಲ
ಮನ್ನಾ
ಮಾಡಬೇಕು,
ಸಾವನ್ನಪ್ಪಿದವರ
ಕುಟುಂಬಕ್ಕೆ
ಪರಿಹಾರ
ನೀಡಬೇಕು
ಎಂದು
ಒತ್ತಾಯಿಸಿದರು.
ಕೇಂದ್ರದ
ರಾಷ್ಟ್ರೀಕೃತ
ಬ್ಯಾಂಕ್
ಗಳು
ರೈತರಿಗೆ
ನೋಟೀಸ್
ಇಶ್ಯೂ
ಮಾಡುತ್ತಿವೆ
ಅದನ್ನು
ತಡೆಯಬೇಕು.
ಕೇಂದ್ರ
ಸರ್ಕಾರ
ಪದೇ
ಪದೇ
ರೈತ
ವಿರೋಧಿ
ಧೋರಣೆಯನ್ನು
ಅನುಸರಿಸುತ್ತಿದೆ
ಎಂದು
ಆರೋಪಿಸಿದರು.
ಪ್ರತಿಭಟನೆಯಲ್ಲಿ
ಶಾಸಕ
ಎಂ.ಕೆ.
ಸೋಮಶೇಖರ್,
ಪುಷ್ಷ
ಅಮರನಾಥ್,
ಸೇರಿದಂತೆ
ಕಾಂಗ್ರೆಸ್
ಕಾರ್ಯಕರ್ತರು,
ರೈತರು
ಪಾಲ್ಗೊಂಡಿದ್ದರು.