ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಮೋದಿ
ಮೈಸೂರು, ಫೆಬ್ರವರಿ 19: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನ ಮಹಾರಾಜ ಮಹಾರಾಜ ಕಾಲೇಜಿನಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ಅವರು ಇಂದು ಶ್ರವಣಬೆಳಗೊಳದ ಮಹಾಮಸ್ತಾಭಿಷೇಕ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾರೆ. ಆ ನಂತರ ಮೈಸೂರಿನಲ್ಲಿ 'ಹಮ್ ಸಫರ್' ರೈಲಿಗೆ ಚಾಲನೆ ನೀಡಿದ್ದಾರೆ.
ಇದೀಗ ಮಹಾರಾಜ ಕಾಲೇಜಿನಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಹಲವು ರಾಜ್ಯ ಬಿಜೆಪಿ ಮುಖಂಡರೊಂದಿಗೆ ಮೋದಿ ಅವರು ಪಾಲ್ಗೊಂಡಿದ್ದಾರೆ.
Newest FirstOldest First
'ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನೆ ಮಾಡಿರಿ, ಈ ಬಾರಿ ಬಿಜೆಪಿ ಗೆಲ್ಲಿಸಿರಿ' ಎಂದು ಕನ್ನಡದಲ್ಲಿ ಹೇಳಿದ ಮೋದಿ
ಬಿಜೆಪಿಗೆ ದೇಶವನ್ನು ಹೊರತುಪಡಿಸಿ ಇನ್ನಾವುದರ ಮೇಲೂ ವ್ಯಾಮೋಹ ಇಲ್ಲ, ಹಾಗಾಗಿ ದೇಶದ ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸಿ: ಮೋದಿ
ಮುಂಚೆ ಸರ್ಕಾರದ 3 ಮತ್ತು 4 ನೇ ದರ್ಜೆಯ ಉದ್ಯೋಗಗಳು ಶಿಫಾರಸ್ಸು, ಲಂಚ ಇಲ್ಲದೆ ಆಗುತ್ತಿರಲಿಲ್ಲ. ಆದರೆ ನಾವು ಈ ವರ್ಗದ ಉದ್ಯೋಗಗಳಿಗೆ ಸಂದರ್ಶನವನ್ನೇ ತೆಗೆದು ಹಾಕಿಬಿಟ್ಟೆವು:ಮೋದಿ
'ಪ್ರತಿ ಬಾರಿ ಸುಳ್ಳು ಹೇಳೋಣ, ಪ್ರತಿ ಬಾರಿ ಸುಳ್ಳು ಹೇಳೋಣ ಎಂದು ಕೆಲವರು ಅಂದುಕೊಂಡಿದ್ದಾರೆ' ಆದರೆ ಅವರನ್ನು ದೇಶ ನಂಬುವುದಿಲ್ಲ ಎಂದು ಕಾಂಗ್ರೆಸ್ ಅವರ ಮೇಲೆ ವಾಗ್ದಾಳಿ ನಡೆಸಿದ ಮೋದಿ
Advertisement
ಕೇಂದ್ರ ಮಾಡುವ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕುತ್ತಿದೆ, ಮುಂದಿನ ಬಾರಿ ಇದೇ ಸರ್ಕಾರ ಇದ್ದರೆ ನಮ್ಮ ಯೋಜನೆಗಳು ನಿಮ್ಮನ್ನು ತಲುಪುತ್ತವೆಯಾ?: ಮೋದಿ
2025 ಸ್ವಾತಂತ್ರದ 75 ನೇ ವರ್ಷಾಚರಣೆ ಅಷ್ಟೊತ್ತಿಗೆ ದೇಶದ ಎಲ್ಲಾ ಕುಟುಂಬಗಳಿಗೂ ಮನೆ ಇರಲೇಬೇಕು ಎಂಬ ಕನಸನ್ನು ನಾವು ಕಂಡಿದ್ದೇವೆ: ಮೋದಿ
3 ಕೋಟಿಗೂ ಹೆಚ್ಚು ನವೋದ್ಯಮಿಗಳು ದೇಶದಲ್ಲಿ ಇದ್ದಾರೆ, ಎಲ್ಲರೂ ಹಲವರಿಗೆ ಉದ್ಯೋಗ ನೀಡಿದ್ದಾರೆ: ಮೋದಿ
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮೂಲಕ ಯುವಕರಿಗೆ ಸಹಾಯ ಮಾಡಿದ್ದೇವೆ, 10 ಕೋಟಿ ಯುವಜನ ಈ ಯೋಜನೆಯ ಲಾಭ ಪಡೆದಿದ್ದಾರೆ: ಮೋದಿ
ರಾಜ್ಯ ಸರ್ಕಾರಕ್ಕೆ ಇಲ್ಲಿನ ಜನರ ಭಾವನೆ, ಜೀವನಗಳ ಮೇಲೆ ಗೌರವೇ ಇಲ್ಲ, ಒಂದು ರಾಜ್ಯ ಹೀಗೆ ನಡೆಯಲು ಸಾಧ್ಯವಿಲ್ಲ: ಮೋದಿ
Advertisement
ಕೇಂದ್ರ ಸರ್ಕಾರ ಬಡವರ ಉದ್ಧಾರಕ್ಕಾಗಿ ಕೊಡುತ್ತಿರುವ ಅನುದಾನವನ್ನು ಕರ್ನಾಟಕ ಸರ್ಕಾರ ಬಳಸುತ್ತಲೇ ಇಲ್ಲ, ಅವರು ತಮ್ಮ ಹೈಕಮಾಂಡ್ ಅನ್ನು ಕ್ಷೇಮವಾಗಿ ಇಡಲು ಅದನ್ನು ಬಳಸುತ್ತಿದ್ದಾರೆ: ಮೋದಿ
ಕರ್ನಾಟಕದಲ್ಲಿ ಕಮಿಷನ್ ಸರ್ಕಾರ ಬೇಕೆ ಅಥವಾ ಮಿಷನ್ (ಯೋಜನೆ) ಇರುವ ಸರ್ಕಾರ ಬೇಕಾ ಎಂದು ಮೋದಿ ಪ್ರಶ್ನೆ
ಕರ್ನಾಟದಲ್ಲಿರುವುದು 10 ಪರ್ಸೆಂಟ್ ಕಮಿಷನ್ ಸರ್ಕಾರ ಅಲ್ಲ, ಇದು ಇನ್ನೂ ಹೆಚ್ಚು ಕಮಿಷನ್ ಪಡೆಯುವ ಸರ್ಕಾರ: ಮೋದಿ
ಸಿದ್ದರಾಮಯ್ಯಗೆ ತಮ್ಮ ಕುರ್ಚಿಯ ಮೇಲೆ ವ್ಯಾಮೋಹ ಇದೆಯೆ ಹೊರತು, ಕರ್ನಾಟಕದ ಮೇಲೆ ಪ್ರೀತಿ ಅಥವಾ ಗೌರವ ಇಲ್ಲ: ಮೋದಿ
ಕಾಂಗ್ರೆಸ್ ಪಕ್ಷವು ಅಭಿವೃದ್ಧಿ ಮರೆತು ಜನರನ್ನು ಒಡೆದು ಆಳುವ ನೀತಿಗೆ ಮೊರೆ ಹೋಯಿತು, ತನ್ನ ಲಾಭಕ್ಕಾಗಿ ಜನರ ನಡುವೆ ಕಂದಕಗಳನ್ನು ಸೃಷ್ಠಿಸಿತು: ಮೋದಿ
50 ವರ್ಷಕ್ಕಿಂತಲೂ ಹೆಚ್ಚು ಕಾಲ ಅಧಿಕಾರದಲ್ಲಿದ್ದು ಅಭಿವೃದ್ಧಿ ಮಾಡದೇ, ಈಗ ನಮ್ಮನ್ನು ಟೀಕೆ ಮಾಡುತ್ತಿರುವುದು ರಾಜಕೀಯವಷ್ಟೆ: ಮೋದಿ
ನಿನ್ನೆ ವಿಧಿವಶರಾದ ಕೆಎಸ್ ಪುಟ್ಟಣ್ಣಯ್ಯ ಅವರನ್ನು ನೆನೆಸಿಕೊಂಡ ಮೋದಿ, ಅವರಿಗೆ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದರು
ಮೈಸೂರಿಗಾಗಿ ನಾಗೇನಹಳ್ಳಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಯಾಟೆಲೈಟ್ ರೈಲ್ವೆ ನಿಲ್ದಾಣ. 1000 ಕೋಟಿ ವೆಚ್ಚದಲ್ಲಿ ಕಾಮಗಾರಿ: ಮೋದಿ
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಹೊಗಳಿದ ಮೋದಿ, ಸದಾ ಚಟುವಟಿಕೆಯಿಂದ ಕೆಲಸ ಮಾಡುವ ಸಂಸದರನ್ನು ನೀವು ಆರಿಸಿ ಕಳಿಸಿದ್ದೀರಿ: ಮೋದಿ
ಪ್ರವಾಸೋದ್ಯಮ ಅತಿ ಹೆಚ್ಚು ಜನರಿಗೆ ಉದ್ಯೋಗ ಕೊಡಿಸುತ್ತದೆ. ಟ್ಯಾಕ್ಸಿ, ಗೆಸ್ಟ್ಹೌಸ್, ದೇವಸ್ಥಾನದ ಬಳಿ ಹೂವು ಮಾರುವವನು, ಗೈಡ್, ಹೋಟೆಲ್ನವನು ಹೀಗೆ ಸಾಕಷ್ಟು ಉದ್ಯೋಗ ಒದಗಿಸುತ್ತದೆ: ಮೋದಿ
ಮೈಸೂರು-ಉದಯಪುರ ರೈಲ್ವೆ ಹಮ್ ಸಫರ್ ಮೂಲಕ, ಕರ್ನಾಟಕ ಮತ್ತು ರಾಜಸ್ಥಾನವನ್ನು ಪ್ರವಾಸೋದ್ಯಮವನ್ನು ಮೂಲಕ ಒಂದು ಮಾಡುವ ಐತಿಹಾಸಿಕ ಕಾರ್ಯ ಇಂದಾಗಿದೆ: ಮೋದಿ
ಕಾದದ ಮೇಲೆ ಉಳಿದಿದ್ದ ಹಳೆಯ ಘೋಷಣೆಗಳನ್ನು ನಾವು ಕಾರ್ಯರೂಪಕ್ಕೆ ತರುತ್ತಿದ್ದೇವೆ, ಕೋಟ್ಯಾಂತರ ಹಣ ನಾವು ರೈಲ್ವೆ ಮೇಲೆ ವಿನಿಯೋಗಿಸಿದ್ದೇವೆ: ಮೋದಿ
ರೈಲ್ವೆ ಕುರಿತು 1500 ಕ್ಕೂ ಹೆಚ್ಚು ಘೋಷಣೆಗಳು ಕೇವಲ ಸಂಸತ್ನಲ್ಲಿ ಹೇಳಲಾಗುತ್ತಿತ್ತು, ಆದರೆ ಅನುಷ್ಠಾನಕ್ಕೆ ಬರಲೇ ಇಲ್ಲ, ಇದು ಈ ಹಿಂದಿನ ಸರ್ಕಾರಗಳ ಕಾರ್ಯ ಪದ್ಧತಿ: ಮೋದಿ
ಕರ್ನಾಟಕದಲ್ಲಿ ಮೊದಲಿಗಿಂತಲೂ ರೈಲ್ವೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಆಗಿದೆ, ವಿದ್ಯುತ್ ರೈಲು, ಹಳಿ ಹೆಚ್ಚಳ, ಹಳಿ ಆಧುನಿಕರಣ ಕಾರ್ಯಗಳು ಆಗಿವೆ: ಮೋದಿ
READ MORE
Comments
English summary
PM Narendra Modi addressing BJP rallu in Mysuru's Maharaja college ground.