ಮೈಸೂರಿನಲ್ಲಿ ಹಳಿ ತಪ್ಪಿದ ಪೆಟ್ರೋಲಿಯಂ ತುಂಬಿದ ರೈಲು
ಮೈಸೂರು, ಅಕ್ಟೋಬರ್ 26: ಮೈಸೂರಿ ರೈಲು ನಿಲ್ದಾಣದ ಬಳಿ ಪೆಟ್ರೋಲಿಯಂ ಟ್ಯಾಂಕರ್ ರೈಲೊಂದು ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
ರೈಲು ಅಪಘಾತಕ್ಕೆ ತಿಂಗಳಿಗೆ 130 ಜನ ಆಹುತಿ: ಸಿಗುತ್ತಿಲ್ಲ ದುರಂತಗಳಿಗೆ ಮುಕ್ತಿ
ಮೈಸೂರಿನ ರೈಲ್ವೆ ನಿಲ್ದಾಣ ಎರಡು ಕಿಲೋಮೀಟರ್ ದೂರಲ್ಲಿ ಸಂಜೆ 4:30 ಸುಮಾರಿಗೆ ಘಟನೆ ನಡೆದಿದ್ದು, ರೈಲಿನ ಹಲವು ಪೆಟ್ರೋಲಿಯಂ ದಾಸ್ತಾನಿನ ಬೋಗಿಗಳು ಹಳಿ ಬಿಟ್ಟಿವೆ.
ಜನರ ಜೀವ ಉಳಿಸಲು ಹೋಗಿ ತಾನೇ ಬಲಿಯಾದ 'ರಾವಣ'
ಪೆಟ್ರೋಲಿಯಂ ರೈಲು ಹಳಿ ತಪ್ಪಿದ ಕಾರಣ ಮೈಸೂರು ರೈಲ್ವೆ ನಿಲ್ದಾಣದ ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ. ಎಲ್ಲ ರೈಲುಗಳು ಸುಮಾರು 2 ಗಂಟೆಗಳ ಕಾಲ ತಡವಾಗಿವೆ.
ಟ್ಯಾಂಕರ್ ಹೊತ್ಯೋಯ್ಯುತ್ತಿದ್ದ ರೈಲಿನ ಚಕ್ರ ಕಳೆದುಕೊಂಡು ಹೋದ ಪರಿಣಾಮ ರೈಲು ಹಳಿ ತಪ್ಪಿದೆ. ಟ್ಯಾಂಕರ್ನಲ್ಲಿದ್ದ ಪೆಟ್ರೋಲಿಯಂ ಅನಿಲ ಸೋರಿಕೆ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಂಡ ಪರಿಣಾಮ ಆಗಬಹುದಾಗಿದ್ದ ಅನಾಹುತ ತಪ್ಪಿದೆ.
ಅಮೃತಸರ ದುರಂತಕ್ಕೆ ಪರಿಹಾರ ನೀಡಲ್ಲ: ರೈಲ್ವೇ ಇಲಾಖೆ
ಹಳಿ ತಪ್ಪಿದ ರೈಲು ಟ್ರಾಕ್ ಪಕ್ಕದ ರೈಲ್ವೆ ಸಿಗ್ನಲ್ಗೆ ಗುದ್ದಿದ ಪರಿಣಾಮ ರೈಲ್ವೆ ಸಿಗ್ನಲ್ ಮುರಿದಿದೆ. ಇದು ತಾಂತ್ರಿಕ ಸಮಸ್ಯೆಯನ್ನು ಉಂಟು ಮಾಡಿತ್ತು. ಆದರೆ ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ.
ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ರೈಲ್ವೆ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ತ್ವರಿತಗತಿಯಲ್ಲಿ ಕಾರ್ಯಚರಣೆ ನಡೆಸಿದ್ದಾರೆ.