ಮೈಸೂರಿನಲ್ಲಿ ಎಸ್ಜಿಎಸ್ ಆಸ್ಪತ್ರೆ ಉದ್ಘಾಟಿಸಿದ ಮೋದಿ
ಮೈಸೂರು, ಜನವರಿ 02 : ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಸಂಜೆ ಮೈಸೂರಿಗೆ ಆಗಮಿಸಿದ್ದಾರೆ. ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ ಮೋದಿ ಎಸ್ಜಿಎಸ್ ಆಸ್ಪತ್ರೆಯನ್ನು ಉದ್ಘಾಟಿಸಿದರು.
ಶನಿವಾರ
ಸಂಜೆ
5.20ರ
ಸುಮಾರಿಗೆ
ಮೈಸೂರಿನ
ಮಂಡಕಳ್ಳಿ
ವಿಮಾನ
ನಿಲ್ದಾಣಕ್ಕೆ
ಆಗಮಿಸಿದ
ನರೇಂದ್ರ
ಮೋದಿ
ಅವರನ್ನು
ರಾಜ್ಯಪಾಲ
ವಜುಭಾಯಿ
ವಾಲಾ
ಮತ್ತು
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಸ್ವಾಗತಿಸಿದರು.
ವಿಮಾನ
ನಿಲ್ದಾಣದಿಂದ
ಮೋದಿ
ಅವರು
ಗೌರಿ
ಶಂಕರ
ನಗರದಲ್ಲಿರುವ
ಗಣಪತಿ
ಸಚ್ಚಿದಾನಂದ
ಆಶ್ರಮಕ್ಕೆ
ತೆರಳಿದರು.
[ಮೋದಿ
ಕರ್ನಾಟಕ
ಭೇಟಿ
:
ಕಾರ್ಯಕ್ರಮಗಳೇನು?]
ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಎಸ್ಜಿಎಸ್ ಆಸ್ಪತ್ರೆಯನ್ನು ಮೋದಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, 'ಸಾಧು ಸಂತರು ಸಮಾಜೋದ್ಧಾರಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು. ಸಚ್ಚಿದಾನಂದ ಶ್ರೀಗಳ ಆಶೀರ್ವಾದ ಪಡೆದು ಸಂಸತವಾಗಿದೆ. ಮೊದಲ ಬಾರಿಗೆ ಇಲ್ಲಿಗೆ ಅವಕಾಶ ಸಿಕ್ಕಿದೆ' ಎಂದು ಹೇಳಿದರು.
'ದತ್ತ ಪೀಠಕ್ಕೆ ಭೇಟಿ ನೀಡಲು ಅವಕಾಶ ದೊರಕಿರುವುದು ನನ್ನ ಪುಣ್ಯ. ದತ್ತ ಪೀಠದ ಆಚರಣೆ, ಸಂಪ್ರದಾಯಗಳ ಬಗ್ಗೆ ನನಗೆ ತಿಳಿದಿದೆ. ನಾದ ಬ್ರಹ್ಮನ ಉಪಾಸನೆ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ' ಎಂದರು.
ಮೋದಿ ಭಾಷಣದ ವಿಡಿಯೋ ನೋಡಿ...