ಚುನಾವಣೆ ದಿನಾಂಕ ಘೋಷಣೆಯಾದರೂ ಅತಂತ್ರ ಸ್ಥಿತಿಯಲ್ಲಿ ರಂದೀಪ್
ಮೈಸೂರು, ಮಾರ್ಚ್ 28 : ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಡಿ.ರಂದೀಪ್ ಅವರಿಗೆ ಸಂಕಷ್ಟ ಎದುರಾಗಿದೆ. ಮೈಸೂರು ನಿರ್ಗಮಿತ ಜಿಲ್ಲಾಧಿಕಾರಿ ರಂದೀಪ್ ಮಾತ್ರ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಂದೀಪ್ಗೆ ಹಾಸನಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. ಇತ್ತ ವರ್ಗಾವಣೆ ಆದೇಶದ ವಿರುದ್ಧ ರೋಹಿಣಿ ಸಿಂಧೂರಿ ಸಿಎಟಿ ಮೊರೆ ಹೋದ ಹಿನ್ನೆಲೆಯಲ್ಲಿ ಮೈಸೂರಿನಿಂದ ನಿರ್ಗಮಿತಗೊಂಡಿದ್ದ ರಂದೀಪ್ ಅಧಿಕಾರ ವಹಿಸಿಕೊಳ್ಳಲಾಗಲಿಲ್ಲ. ಇತ್ತ ಮೈಸೂರಿನ ಡಿಸಿಯಾಗಿ ಶಿವಕುಮಾರ್ ಅಧಿಕಾರ ವಹಿಸಿಕೊಂಡರು.
ಅತಂತ್ರರಾಗಿದ್ದಾರೆ ಐಎಎಸ್ ಅಧಿಕಾರಿ ರಂದೀಪ್!
ಕಳೆದ 20 ದಿನಗಳಿಂದ ಮೈಸೂರು, ಹಾಸನದಲ್ಲಿ ಪೋಸ್ಟಿಂಗ್ ಇಲ್ಲದೆ ರಂದೀಪ್ ಮೈಸೂರಿನ ಜಿಲ್ಲಾಧಿಕಾರಿ ನಿವಾಸದಲ್ಲಿಯೇ ಉಳಿದು ಕೊಂಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಹೊಸ ವರ್ಗಾವಣೆಗೂ ಸರ್ಕಾರ ಆದೇಶ ಮಾಡುವ ಆಗಿಲ್ಲ. ಸಿಎಟಿ ಆದೇಶಕ್ಕಾಗಿ ರಂದೀಪ್ ಕೂಡ ಕಾಯುತ್ತಿದ್ದಾರೆ. ಸಿಎಟಿ ಆದೇಶ ಹೊರಡಿಸದಿದ್ದರೆ ಚುನಾವಣೆ ಮುಗಿಯುವವರೆಗೂ ರಂದೀಪ್ ಸುಮ್ಮನೇ ಕೂರಬೇಕಾದ ಸ್ಥಿತಿ ಎದುರಾಗುತ್ತದೆಯಷ್ಟೇ.