ಮೈಸೂರಿನಲ್ಲಿ ಎರಡು ಬೈಕ್ ಮುಖಾಮುಖಿ ಡಿಕ್ಕಿ: ಐವರು ಸಾವು
ಮೈಸೂರು, ಏಪ್ರಿಲ್ 27: ಮೈಸೂರಿನ ಕೆ ಆರ್ ನಗರ ತಾಲೂಕಿನ ಅನಸೋಗೆ ಬಳಿ ಇಂದು(ಏ.27) ಬೆಳಗ್ಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಐದು ಮಂದಿ ದಾರುಣ ಸಾವು ಕಂಡಿದ್ದಾರೆ.
ಎರಡು ಬೈಕುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದು ಬೈಕಿನಲ್ಲಿದ್ದ ನಾಲ್ಕು ಮಂದಿ ಮತ್ತು ಇನ್ನೊಂದು ಬೈಕಿನಲ್ಲಿದ್ದ ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಗಳು ಸುಟ್ಟು ಕರಕಲಾಗಿದ್ದು, ಹೊತ್ತಿಕೊಂಡ ಬೆಂಕಿಗೆ ಸಿಲುಕಿ ಮೂವರು ಸಜೀವ ದಹನವಾಗಿದ್ದಾರೆ.
ಬಿಳಿ ಯೂನಿಫಾರ್ಮ್ ತುಂಬ ರಕ್ತ, ರಕ್ತ: ಆ ಮಕ್ಕಳ ಸಾವಿಗೆ ಹೊಣೆ ಯಾರು?
ಮೃತರಲ್ಲಿ ಇಬ್ಬರನ್ನು ಕೆ.ಎಸ್.ಆರ್.ಟಿ.ಸಿ. ಕೇರಳಾಪುರದ ರಾಮನಾಥಪುರ ವಿಭಾಗದಲ್ಲಿ ಟ್ರಾಫಿಕ್ ಕಂಟ್ರೋಲರ್ ಆಗಿದ್ದ ಸಂತೋಷ್ ಹಾಗೂ ಕೆ.ಆರ್.ನಗರ ಚೆನ್ನಮ್ಮಗೆರೆ ಗ್ರಾಮದ ನಿವಾಸಿ ಪಾಪಣ್ಣ ಎಂದು ಗುರುತಿಸಲಾಗಿದೆ. ಉಳಿದ ಮೂವರ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.
ಕೆ.ಆರ್.ನಗರ ಪೊಲೀಸ್ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
Comments
English summary
In a tragic incident 5 men died after they met an accident. The incident took place i KR Nagar taluk in Mysuru.
Story first published: Friday, April 27, 2018, 9:35 [IST]