ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಕಾಶ್ ರೈ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು

By Yashaswini
|
Google Oneindia Kannada News

ಮೈಸೂರು, ಅಕ್ಟೋಬರ್ 3: ನಟ ಪ್ರಕಾಶ್ ರೈ ಅವರು ಮೋದಿ ನನಗಿಂತ ದೊಡ್ಡ ನಟ ಎಂಬ ಹೇಳಿಕೆಗೆ ಸಂಬಂಧಪಟ್ಟಂತೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಪ್ರಕಾಶ್ ರೈ ಹೇಳಿಕೆಗಳನ್ನು ನೀಡುವಾಗ ಗಮನ ಹರಿಸಿ ಮೊದಲು. ರಾಜ್ಯದ ಕಾನೂನು ಸುವ್ಯವವಸ್ಥೆ ಸರಿ ಇಲ್ಲದಿದ್ದಲ್ಲಿ ಪ್ರಧಾನಿಯವರು ಏನು ಮಾಡಲು ಸಾಧ್ಯ..? ಎಂದಿದ್ದಾರೆ.

'ಉ.ಪ್ರ ಸಿಎಂ ನಟನೆಗೆ ನನ್ನೆಲ್ಲ ರಾಷ್ಟ್ರಪ್ರಶಸ್ತಿ ಕೊಡೋಣ ಅನಿಸಿತು''ಉ.ಪ್ರ ಸಿಎಂ ನಟನೆಗೆ ನನ್ನೆಲ್ಲ ರಾಷ್ಟ್ರಪ್ರಶಸ್ತಿ ಕೊಡೋಣ ಅನಿಸಿತು'

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಕಾಶ್ ರೈ ಅವರು ತನ್ನ ಸ್ನೇಹಿತೆ ಕೊಲೆಯಾಗಿದ್ದಾಳೆ ಅಂತ ಈ ರೀತಿ ಎಲ್ಲ ಮಾತಾಡುತ್ತಿದ್ದಾರೆ. ಹಿಂದೂ ಪರ ಸಂಘಟನೆಗಳವರು 12ಕ್ಕಿಂತ ಅಧಿಕ ಮಂದಿ ಸತ್ತಿದ್ದಾರೆ.

ಆಗ ಯಾಕೆ ಮಾತಾಡಲಿಲ್ಲ. ಬಂಟ್ವಾಳದವರಾದ ರೈ, ಶರತ್ ಮಡಿವಾಳ ಕೊಲೆಯಾದಾಗ ಯಾಕೆ ಮಾತಾಡಲಿಲ್ಲ. ತಮಿಳುನಾಡಿಗೆ ಹೋಗಿ ಪ್ರಕಾಶ್ ರಾಜ್ ಆಗ್ತಾರೆ. ಕರ್ನಾಟಕಕ್ಕೆ ಬಂದು ಪ್ರಕಾಶ್ ರೈ ಆಗ್ತಾರೆ ಅವರೇ ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಕಾಶ್ ರಾಜ್ ವಿವಾದಾತ್ಮಕ ಹೇಳಿಕೆ: ಟ್ವಿಟ್ಟಿಗರು ಏನಂತಾರೆ?ಪ್ರಕಾಶ್ ರಾಜ್ ವಿವಾದಾತ್ಮಕ ಹೇಳಿಕೆ: ಟ್ವಿಟ್ಟಿಗರು ಏನಂತಾರೆ?

ಕರ್ನಾಟಕದ ಕುರಿತು ಕಾಳಜಿ ಇರುವವರು ಕಾವೇರಿ ನೀರಿನ ಕುರಿತು ಯಾಕೆ ಚಕಾರವೆತ್ತುತ್ತಿಲ್ಲ. ಪ್ರಧಾನಿ ಮೋದಿಯವರು ರಜೆ ಇಲ್ಲದೆ ನಿರಂತರ ಭಾರತಮಾತೆಯ ಸೇವೆಯಲ್ಲಿ ತೊಡಗುತ್ತಾರೆ. ಅಂಥವರ ಬಗ್ಗೆ ಮಾತಾಡುವಾಗ ಪ್ರಜ್ಞೆ ಇರಲಿ. ಇನ್ನು ಮುಂದೆ ನೀವು ಯಾವುದೇ ವೇದಿಕೆಯಲ್ಲಿ ಇಂಥ ಅಸಂಬದ್ಧ ಹೇಳಿಕೆಗಳನ್ನು ನೀಡಿದಲ್ಲಿ ಅದೇ ವೇದಿಕೆಗೆ ಬಂದು ನಿಮಗೆ ವಿಸ್ತಾರವಾಗಿ ವಿವರಿಸಬೇಕಾಗುತ್ತದೆ ಎಂದರು.

English summary
Mysuru Kodagu MP Pratap Simha has spoken against actor Prakash Rai, who expressed his displeasure over Prime Minister Narendra Modi's silence on Kannada journalist Gauri Lankesh's murder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X