ಚಂದ್ರ ಗ್ರಹಣಕ್ಕೆ ಆಷಾಢ ಶುಕ್ರವಾರ ಚಾಮುಂಡಿ ದೇವಿ ದರ್ಶನ ಸಮಯ ಬದಲು
Recommended Video
ಮೈಸೂರು, ಜುಲೈ 26 : ಖಗ್ರಾಸ ಚಂದ್ರಗ್ರಹಣವು ಶುಕ್ರವಾರ ಇದ್ದು, ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಶುಕ್ರವಾರ ರಾತ್ರಿ 9 ಗಂಟೆಗೆ ಚಾಮುಂಡೇಶ್ವರಿ ದೇವಾಲಯ ಬಂದ್ ಮಾಡಲಾಗುತ್ತದೆ. ಗ್ರಹಣದ ನಿಮಿತ್ತ ದೇವಾಲಯ 2 ಗಂಟೆ ಮುಂಚಿತವಾಗಿ ದರ್ಶನ ಸ್ಥಗಿತ ಮಾಡಲಾಗುತ್ತಿದೆ. ಆಷಾಢ ಶುಕ್ರವಾರದಲ್ಲಿ ಲಕ್ಷಾಂತರ ಭಕ್ತರು ಬರುವ ಕಾರಣಕ್ಕೆ ಭಕ್ತರ ಸುಗಮ ಸಂಚಾರಕ್ಕೆ ಅನುಕೂಲವಾಗಲು ಖಾಸಗಿ ವಾಹನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಚಂದ್ರ ಗ್ರಹಣದ ವೇಳೆ ಕೈಗೊಳ್ಳಬೇಕಾದ ಶಾಂತಿ-ಪರಿಹಾರದ ಪೂರ್ಣ ವಿವರ
ಭಕ್ತರು ಬೆಟ್ಟಕ್ಕೆ ತೆರಳಲು ಲಲಿತ ಮಹಲ್ ಹೆಲಿಪ್ಯಾಡ್ ನಿಂದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ರಾತ್ರಿ 9 ಗಂಟೆಯೊಳಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶವಿದೆ. ಆಷಾಢ ಮಾಸದ ಶುಕ್ರವಾರಗಳಂದು ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಆದರೆ ಚಂದ್ರ ಗ್ರಹಣದ ಕಾರಣಕ್ಕೆ ಇಪ್ಪತ್ತೇಳನೇ ತಾರೀಕು ರಾತ್ರಿ 9 ಗಂಟೆಗೆ ದೇವಾಲಯದ ಬಾಗಿಲು ಹಾಕಿ, ಮಧ್ಯ ರಾತ್ರಿ ದೇವಿಗೆ ವಿಶೇಷ ಪೂಜೆ ನಡೆಸಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.
ಲಕ್ಷ
-
ಲಕ್ಷ
ಆದಾಯ
ಚಾಮುಂಡಿ
ಬೆಟ್ಟದಲ್ಲಿ
ಭಕ್ತರು
ಚಾಮುಂಡಿ
ದೇವಿಗೆ
ಹರಕೆ
ರೂಪದಲ್ಲಿ
ನೀಡುವ
ಸೀರೆಗಳ
ಹರಾಜಿನಿಂದ
ದೇವಸ್ಥಾನಕ್ಕೆ
ಭಾರೀ
ಆದಾಯ
ಬಂದಿದೆ.
ದೇವಿಗೆ
ಉಡಿಸುವ
ಸೀರೆಗಳ
ಹರಾಜಿನಿಂದ
ಈ
ವರ್ಷ
ಒಂದು
ಕೋಟಿ
73
ಲಕ್ಷ
ರುಪಾಯಿ
ಆದಾಯ
ಬಂದಿದೆ.
ಚಂದ್ರಗ್ರಹಣ: ದಿನಪೂರ್ತಿ ಕೃಷ್ಣನ ದರ್ಶನಕ್ಕೆ ಮುಕ್ತ ಅವಕಾಶ
ಈ ಮೊದಲು ಬಹಿರಂಗವಾಗಿ ಸೀರೆ ಹರಾಜು ಮಾಡಲಾಗುತ್ತಿತ್ತು. ಆಗ ಭಾರೀ ಬೆಲೆಯ ಸೀರೆಗಳು ಕಡಿಮೆ ಬೆಲೆಗೆ ಹರಾಜು ಆಗುತಿತ್ತು. ಹೀಗಾಗಿ ಸೀರೆಗಳ ಬಹಿರಂಗ ಹರಾಜಿನಿಂದ ಕಡಿಮೆ ಆದಾಯ ಬರುತ್ತಿತ್ತು.
ಈಗ ಈ ಪದ್ಧತಿ ಬದಲಾಯಿಸಿ ಸೀರೆಯ ಮುಖಬೆಲೆಯ ಮೇಲೆ ಶೇಕಡಾ 25ರಷ್ಟು ರಿಯಾಯಿತಿ ನೀಡಿ, ಹರಾಜು ಹಾಕಲಾಗುತ್ತಿದೆ. ಅದರ ಪರಿಣಾಮವಾಗಿ ಸೀರೆ ಹರಾಜಿನಿಂದ ಬರುವ ಆದಾಯ ದುಪ್ಪಟ್ಟಾಗಿದೆ. ಆದ್ದರಿಂದ ಈ ಬಾರಿ ಸೀರೆಗಳು ಹರಾಜಿನಿಂದ ಆದಾಯ ಹೆಚ್ಚಳವಾಗಿದೆ.