ಕೃಷ್ಣ ಕೊಲೆ ಪ್ರಕರಣ : ಐವರು ಆರೋಪಿಗಳು ಪೊಲೀಸರಿಗೆ ಶರಣು
ಮೈಸೂರು, ಡಿಸೆಂಬರ್. 25 : ಚಿಕನ್ ಸ್ಟಾಲ್ ಮಾಲೀಕ ಕೃಷ್ಣ ಅಲಿಯಾಸ್ ಬೆಣ್ಣೆ ಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳು ವಿವಿಪುರಂ ಪೊಲೀಸರಿಗೆ ಶನಿವಾರ ಶರಣಾಗಿದ್ದಾರೆ.
ಹೇಮಂತ್, ಸಂದೇಶ್, ಧರ್ಮ, ಮೂರ್ತಿ, ಸಂಜು ಎಂಬವರೇ ಈ ಕೊಲೆಗೈಯ್ದಿರುವುದಾಗಿ ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ.
ವಿವಿಪುರಂನಲ್ಲಿ ಶುಕ್ರವಾರ ಹಾಡುಹಗಲೇ ಚಿಕನ್ ಸ್ಟಾಲ್ ಮಾಲೀಕ ಕೃಷ್ಣ ಅಲಿಯಾಸ್ ಬೆಣ್ಣೆ ಕೃಷ್ಣ ಎಂಬವನನ್ನು ಮುಸುಕುಧಾರಿಗಳ ತಂಡವೊಂದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿತ್ತು.[ಮೈಸೂರಿನಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಕೊಲೆ]
ಕೊಲೆಗೆ ಸಂಬಂಧಿಸಿದಂತೆ ಇನ್ಸಪೆಕ್ಟರ್ ರವಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆದರೆ, ಶನಿವಾರ ಮಧ್ಯಾಹ್ನ ಆರೋಪಿಗಳು ತಾವೇ ವಕೀಲ ಬಸವರಾಜು ಎಂಬವರ ಜೊತೆ ಬಂದು ಶರಣಾಗಿದ್ದಾರೆ.
ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗುತ್ತಿದ್ದು, ವಿವಿಪುರಂ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.
Comments
English summary
Friday broad daylight murder of 38-year-old rowdy Krishna alias Loose Krishna at VV Mohalla, five persons surrender before VV Puram Police Station here on Saturday.
Story first published: Sunday, December 25, 2016, 12:13 [IST]