ಮೈಸೂರು: ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ದರ್ಶನ್
ಹೈ ವೋಲ್ಟೇಜ್ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ನಡೆಸುತ್ತಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಿದ್ದರಾಮಯ್ಯ ಅವರ ಪುತ್ರ ದಿ.ರಾಕೇಶ್ ಅವರನ್ನು ಈ ಸಂದರ್ಭದಲ್ಲಿ ನೆನೆಪಿಸಿಕೊಂಡರು.
ಜೆಡಿಎಸ್ ಕಾರ್ಯಕರ್ತರ ವಿರೋಧದ ನಡುವೆಯೂ ಪ್ರಚಾರ ನಡೆಸಿದ ದರ್ಶನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಪರ ಚಾಮುಂಡೇಶ್ವರಿಯಲ್ಲಿ ದರ್ಶನ್ ಪ್ರಚಾರ
ಚಾಮುಂಡೇಶ್ವರಿ ವಿದಾನಸಭಾ ಕ್ಷೇತ್ರದ ನಾಗನಹಳ್ಳಿ ಗ್ರಾಮಸ್ಥರು ನಟ ದರ್ಶನ್ ವಿರುದ್ಧ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ತಮ್ಮ ಪ್ರಚಾರ ಕಾರ್ಯಕ್ರಮವನ್ನು ಬೇರೆಡೆಗೆ ಬದಲಿಸಿದ್ದ ದರ್ಶನ್ ರೋಡ್ ಶೋ ನಡೆಸಿ ಮಾತನಾಡಿದರು.
"ಪುತ್ರ ರಾಕೇಶ್ ಅವರ ಅಕಾಲಿಕ ನಿಧನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ನೋವು ತಂದಿತ್ತಾದರೂ ಅದ್ಯಾವುದಕ್ಕೂ ತೋರಿಸಿಕೊಳ್ಳದೆ ಅವರು ತಮ್ಮ ಕರ್ತವ್ಯಕ್ಕೆ ಮರಳಿದರು. ವೈಯಕ್ತಿಕ ದುಃಖವನ್ನು ಮನಸ್ಸಿನಲ್ಲಿಟ್ಟುಕೊಂಡು ತಮಗೆ ಮತ ನೀಡಿದ ಮತದಾರರಿಗೆ ಮೋಸ ಮಾಡಬಾರದು ಎಂದು ಸಿದ್ದರಾಮಯ್ಯ ಮತ್ತೆ ಜನಸೇವೆ ಆರಂಭಿಸಿದರು. ಇದು ಅವರಲ್ಲಿ ನಾನು ಬಹಳ ಮೆಚ್ಚುವ ಗುಣ. ಅವರು ಭಳ ಧೈರ್ಯವಂಯತರು. ಅದಕ್ಕೆಂದೇ ಅವರ ಪರ ಪ್ರಚಾರಕ್ಕೆ ಬಂದಿದ್ದೇನೆ" ಎಂದು ಇಲ್ಲಿನ ರಮ್ಮನಹಳ್ಳಿಯಲ್ಲಿ ಪ್ರಚಾರ ನಡೆಸಿದ ರ್ಶನ್ ಹೇಳಿಕೆ ನೀಡಿದರು.