ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಘಾತ
Recommended Video
ಮೈಸೂರು, ಮೇ 15: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಘಾತಕಾರಿ ಸೋಲು ಅನುಭವಿಸಿದ್ದಾರೆ.
ಬಾದಾಮಿಯಲ್ಲಿ ಗೆಲುವು ಕಂಡಿರುವ ಸಿದ್ದರಾಮಯ್ಯ, ತವರಿನಲ್ಲಿಯೇ ಸೋಲು ಕಾನುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ.
LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್
ಜೆಡಿಎಸ್ನ ಜಿಟಿ ದೇವೇಗೌಡ ಅವರು 30 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸಿದ್ದರಾಮಯ್ಯ ಅವರಿಗೆ ಸೋಲು ಉಣಿಸಿದ್ದಾರೆ.
ಮತ ಎಣಿಕೆಯ ಆರಂಭದಿಂದಲೂ ಜಿ.ಟಿ. ದೇವೇಗೌಡ ಅವರು ಮುನ್ನಡೆ ಸಾಧಿಸಿದ್ದರು. ಅಲ್ಪ ಮತದ ಮುನ್ನಡೆ ಸಾಧಿಸಿದ್ದಾಗ, ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿರುವ ಮತಗಟ್ಟೆಗಳಿಂದ ಸಿದ್ದರಾಮಯ್ಯ ಅವರಿಗೆ ಅಧಿಕ ಮತಗಳು ಬರಬಹುದು. ಚಿತ್ರಣ ಬದಲಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ, ದೇವೇಗೌಡ ಅವರು ಮತಗಳ ಅಂತರ ಹೆಚ್ಚಿಸಿಕೊಳ್ಳುತ್ತಲೇ ಮುನ್ನಡೆ ಸಾಧಿಸಿದರು.
ಚಾಮುಂಡೇಶ್ವರಿಯಲ್ಲಿ ಒಟ್ಟು 2,95,815 ಮತದಾರರಿದ್ದು, 1,14,785 ಪುರುಷ ಹಾಗೂ 1,10,182 ಮಹಿಳಾ ಮತದಾರರಿದ್ದಾರೆ. ಈ ಬಾರಿ ಒಟ್ಟು ಶೇ 76.05 ರಷ್ಟು ಮತದಾನವಾಗಿತ್ತು.