ಸಿದ್ದರಾಮಯ್ಯ ಮಂಡಿಸಿದ್ದು ಚುನಾವಣೆ ಬಜೆಟ್: ಪ್ರತಾಪ್ ಕಿಡಿ
ಮೈಸೂರು, ಫೆಬ್ರವರಿ 16: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 13ನೇ ಬಜೆಟ್ 'ಕೇವಲ ಚುನಾವಣೆ ಬಜೆಟ್' ಅಷ್ಟೇ. ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ವೀರ ಎಂದಿದ್ದಾರೆ ಸಂಸದ ಪ್ರತಾಪ್ ಸಿಂಹ.
ಮೈಸೂರಿನಲ್ಲಿಂದು ಬಜೆಟ್ ಮತ್ತು ಕಾವೇರಿ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಬಜೆಟ್ ಮಂಡನೆ ಮೂಲಕ ಜನರ ಕಣ್ಣಿಗೆ ಮಣ್ಣೆರಚಲು ಹೊರಟಿದ್ದಾರೆ. ಮುಂದೆ ಯಡಿಯೂರಪ್ಪ ನೇತೃತ್ವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಮುಂದೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
Live : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳು
ಕಾವೇರಿ
ತೀರ್ಪು
ಸ್ವಾಗತಾರ್ಹ
ಕಾವೇರಿ
ತೀರ್ಪು
ಕರ್ನಾಟಕದ
ಪರವಾಗಿ
ಬಂದಿರುವುದಕ್ಕೆ
ನಗರ
ಬಿಜೆಪಿಯಿಂದ
ಸಿಹಿ
ಹಂಚಿ
ಸಂಭ್ರಮ
ಆಚರಿಸಲಾಯಿತು.
ಈ
ಸಂದರ್ಭದಲ್ಲಿ
ಮಾತನಾಡಿದ
ಪ್ರತಾಪ್
ಸಿಂಹ,
ಈ
ತೀರ್ಪು
ಸಂತಸವನ್ನುಂಟುಮಾಡಿದೆ.
ಕರ್ನಾಟಕದ
ಹೋರಾಟಕ್ಕೆ
ಜಯ
ಸಿಕ್ಕಂತಾಗಿದೆ
ಎಂದು
ಅವರು
ಹೇಳಿದರು.