ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮಪ್ಪ ನನಗೆ 'ಗೌಡ' ಎಂದು ಹೆಸರಿಟ್ಟಿದ್ದೇ ತಪ್ಪಾ: ದೇವೇಗೌಡ ಪ್ರಶ್ನೆ

|
Google Oneindia Kannada News

Recommended Video

ಎಚ್ ಡಿ ದೇವೇಗೌಡ್ರು ಇಷ್ಟೊಂದ್ ಬೇಜಾರ್ ಆಗಿ ಮಾತನಾಡಿದ್ದಕ್ಕೆ ಕಾರಣ ಏನು?| Oneindia Kannada

ಮೈಸೂರು, ಏಪ್ರಿಲ್ 29: ದೇವೇಗೌಡರು ಕೇವಲ ಗೌಡ ಸಮುದಾಯದ ಪರ ಎಂಬ ಟೀಕೆಗೆ ಬೇಸರಗೊಂಡ ಜನತಾದಳ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು 'ನಮ್ಮಪ್ಪ ನನಗೆ 'ಗೌಡ' ಎಂದು ಹೆಸರಿಟ್ಟಿದ್ದು ತಪ್ಪಾ? ನಾನು ಯಾರಿಗೆ ಮೋಸ ಮಾಡಿದ್ದೀನಿ? ಎಂದರು.

ಮೈಸೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಯಾವ ಪಾಪವನ್ನೂ ಮಾಡಿಲ್ಲ. ಆದರೆ, ನನ್ನ ಬೆನ್ನಿಗೆ ಚೂರಿ ಹಾಕುವವರ ಸಂಖ್ಯೆ ಹೆಚ್ಚಿದೆ. ನಮ್ಮಪ್ಪ ನನಗೆ ಗೌಡ ಎಂದು ಹೆಸರಿಟ್ಟರು. ಯಾವ ವರ್ಗಕ್ಕೆ ಮೋಸ ಮಾಡಿದ್ದೇನೆ ಹೇಳಿ' ಎಂದು ಪ್ರಶ್ನಿಸಿದರು.

I never cheat any community in my political career: Deve Gowda

ನಾನು ಯಾರನ್ನು ಮೆಚ್ಚಿ ಬೆನ್ನುತಟ್ಟುತ್ತೇನೊ ಅವರೇ ನನಗೆ ದ್ರೋಹ ಮಾಡುತ್ತಾರೆ ಎಂದ ಅವರು ಸಿದ್ದರಾಮಯ್ಯ ಅದ್ಬುತ ನಾಯಕ ಎಂದು ಹೇಳಿದ್ದೆ ಆದರೆ ಅವರೇ ನನಗೆ ಮೋಸ ಮಾಡಿದರು. ಹಲವಾರು ಅಂಹಿಂದ ನಾಯಕರನ್ನು ನಾನು ಬೆಳೆಸಿದ್ದೇನೆ ಎಂದರು.

ದೇವೇಗೌಡರ ಬದುಕಿನ ಒಂದೇ ಒಂದು ಕೊರಗು ಅಂದ್ರೆ...ದೇವೇಗೌಡರ ಬದುಕಿನ ಒಂದೇ ಒಂದು ಕೊರಗು ಅಂದ್ರೆ...

ಕುಮಾರಸ್ವಾಮಿ ವರ್ಚಸ್ಸಿನಿಂದ ಕಾಂಗ್ರೆಸ್‌ ಮುಖಂಡರು ಹತಾಶರಾಗಿದ್ದಾರೆ. ಹೀಗಾಗಿ, ಜೆಡಿಎಸ್‌ನವರು ಮುಸ್ಲಿಂ ವಿರೋಧಿಗಳು, ದಲಿತ ವಿರೋಧಿಗಳು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅಧಿಕಾರ ವ್ಯಾಮೋಹಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭಯದಿಂದ ಬಾದಾಮಿಗೆ ಹೋಗಿದ್ದಾರೆ' ಎಂದು ಅವರು ಟೀಕಿಸಿದರು.

ಹರದನಹಳ್ಳಿಯಲ್ಲಿ ಗೊಣ್ಣೆ ಸುರಿಸಿಕೊಂಡಿದ್ದವ ಪ್ರಧಾನಿಯಾಗಲಿಲ್ಲವೇ?: ದೇವೇಗೌಡ ಸ್ವಯಂ ಲೇವಡಿಹರದನಹಳ್ಳಿಯಲ್ಲಿ ಗೊಣ್ಣೆ ಸುರಿಸಿಕೊಂಡಿದ್ದವ ಪ್ರಧಾನಿಯಾಗಲಿಲ್ಲವೇ?: ದೇವೇಗೌಡ ಸ್ವಯಂ ಲೇವಡಿ

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗಿಂತಲೂ ಜೆಡಿಎಸ್‌ಗೆ ಅಧಿಕ ಸೀಟುಗಳು ಬರುತ್ತವೆ ಎಂದ ದೇವೇಗೌಡ ಅವರು, ತಿರುಕನ ಎಂದುಕೊಂಡರೂ ಪರವಾಗಿಲ್ಲ ಆದರೆ ನಮ್ಮ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ, ಜೆಡಿಎಸ್‌ಗೆ 35-40 ಸೀಟು ಬರುತ್ತದೆ ಎನ್ನುವ ನಾಲ್ಕಾಣೆ ಏಜೆನ್ಸಿಗಳ ಸಮೀಕ್ಷೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದರು.

English summary
JDS national president HD Deve Gowda said 'I would not cheated any community people in my potical life'. He also said JDS will win more seats than BJP and congress this time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X