ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ವಿದ್ಯಾರ್ಥಿ ಚಿಕಿತ್ಸಾ ವೆಚ್ಚ ಭರಿಸಿದ ಸಾರಿಗೆ ಇಲಾಖೆ

|
Google Oneindia Kannada News

ಮೈಸೂರು, ಡಿಸೆಂಬರ್ 04 : ಮೈಸೂರಿನ ಖಾಸಗಿ ಶಾಲೆ ವಿದ್ಯಾರ್ಥಿ ಉಲ್ಲೇಖ್‌ಗೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ವಿತರಣೆ ಮಾಡಿದರು. ಕೆಎಸ್ಆರ್‌ಟಿಸಿ ಬಸ್ ಹತ್ತುವಾಗ ಬಿದ್ದು, ಉಲ್ಲೇಖ್ ಕಾಲು ಕಳೆದುಕೊಂಡಿದ್ದ.

ಸೋಮವಾರ ಮೈಸೂರಿನ ಅನಘಾ ಆಸ್ಪತ್ರೆಗೆ ಭೇಟಿ ನೀಡಿದ ರೇವಣ್ಣ ಅವರು, 1 ಲಕ್ಷದ 10 ಸಾವಿರ ರೂ. ಚಿಕಿತ್ಸಾ ವೆಚ್ಚವನ್ನು ನೀಡಿದರು. ವಿದ್ಯಾರ್ಥಿಯ ಮುಂದಿನ ಚಿಕಿತ್ಸಾ ವೆಚ್ಚ, ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ಬೆಂಗಳೂರು-ಮೈಸೂರು ಫ್ಲೈ ಬಸ್ ದರ ಇಳಿಕೆಬೆಂಗಳೂರು-ಮೈಸೂರು ಫ್ಲೈ ಬಸ್ ದರ ಇಳಿಕೆ

HM Revanna distributes medical expenses to student

ಸಾರಿಗೆ ಸಚಿವರೇ ಖುದ್ದಾಗಿ ಮೈಸೂರಿಗೆ ಆಗಮಿಸಿ ವಿದ್ಯಾರ್ಥಿಯ ಯೋಗಕ್ಷೇಮವನ್ನು ವಿಚಾರಿಸಿದರು. ಘಟನೆಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದರು.

ಶಬರಿಮಲೆಗೆ ಕೆಎಸ್ಸಾರ್ಟಿಸಿಯಿಂದ ರಾಜಹಂಸ ಸೇವೆಶಬರಿಮಲೆಗೆ ಕೆಎಸ್ಸಾರ್ಟಿಸಿಯಿಂದ ರಾಜಹಂಸ ಸೇವೆ

ಅಕ್ಟೋಬರ್ 25ರಂದು ಸಂಜೆ ಮೈಸೂರು ಬಸ್ ನಿಲ್ದಾಣದ ಸಮೀಪ ಕೆಎಸ್ಆರ್‌ಟಿಸಿ ಬಸ್ ಹತ್ತಲು ಹೋದಾಗ ಉಲ್ಲೇಖ್ ಆಯತಪ್ಪಿ ಬಿದ್ದಿದ್ದ. ಆಗ ಬಸ್ ಆತನ ಕಾಲ ಮೇಲೆ ಹತ್ತಿ ಎಡಗಾಲು ಕಟ್ ಆಗಿತ್ತು.

ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಮತ್ತೆ ಜೀವಕಳೆ?ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಮತ್ತೆ ಜೀವಕಳೆ?

ಬಸ್ ಕಂಡಕ್ಟರ್, ಚಾಲಕರ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷತನದ ಪ್ರಕರಣ ದಾಖಲಾಗಿತ್ತು. ಇಂದು ಸಚಿವರು ವಿದ್ಯಾರ್ಥಿಗೆ ಪರಿಹಾರವನ್ನು ವಿತರಣೆ ಮಾಡಿದ್ದಾರೆ.

English summary
Transport minister H.M.Revanna on December 4, 2017 distribute medical expenses to student Ullekh (14) who lost his left leg after a KSRTC bus ran over it when he fell down trying to climb the bus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X