ಹೆಚ್ಡಿಕೆ ಶೀಘ್ರ ಗುಣಮುಖವಾಗಲೆಂದು ಮೈಸೂರಿನಲ್ಲಿ ವಿಶೇಷ ಪೂಜೆ
ಮೈಸೂರು, ಸೆಪ್ಟೆಂಬರ್ 23: ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಇಂದು(ಸೆ.23) ಹೃದಯ ಶಸ್ತ್ರಚಿಕಿತ್ಸೆ ನಡೆದಿದ್ದು, ಶೀಘ್ರ ಗುಣಮುಖರಾಗುವಂತೆ ಎಂದು ಜೆಡಿಎಸ್ ಮುಖಂಡರು ದೇವರಮೊರೆ ಹೋಗಿದ್ದಾರೆ.
ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮುಖಂಡರು , ಕುಮಾರಸ್ವಾಮಿ ಆರೋಗ್ಯ ಸ್ಥಿರವಾಗಲಿ ಎಂದು ಪ್ರಾರ್ಥಿಸಿದರು. ಮೈಸೂರು ಚಾಮರಾಜ ಕ್ಷೇತ್ರದ ಜೆಡಿಎಸ್ ಟಿಕೇಟ್ ಆಕಾಂಕ್ಷಿ ರಂಗಪ್ಪ ನೇತೃತ್ವದಲ್ಲಿ ದೇವಸ್ಥಾನಕ್ಕೆ ತೆರಳಿದ ಜೆಡಿಎಸ್ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಜೊತೆಗೆ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳು ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಅಖಿಲ ಕರ್ನಾಟಕ ಎಚ್.ಡಿ.ಕುಮಾರಸ್ವಾಮಿ ಮತ್ತು ಜಿ.ಟಿ.ದೇವೇಗೌಡರ ಅಭಿಮಾನಿಗಳ ಸಂಘದ ವತಿಯಿಂದ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
ದಕ್ಷಿಣಕನ್ನಡದಲ್ಲೂ
ಪೂಜೆ:
ಇದೇ
ಸಂದರ್ಭದಲ್ಲಿ
ದಕ್ಷಿಣಕನ್ನಡ
ಜಿಲ್ಲಾ
ಯುವ
ಜನತಾದಳ
ವತಿಯಿಂದ
ಮಂಗಳೂರು
ನಗರದ
ಪ್ರಸಿದ್ಧ
ಕುದ್ರೋಳಿ
ಗೋಕರ್ಣನಾಥೆಶ್ವರ
ದೇವಸ್ಥಾನದಲ್ಲಿ
ವಿಶೇಷ
ರುದ್ರಅಭೀಷೇಕ
ಪೂಜೆ
ನೀಡಲಾಯಿತು.
ನಂತರ
ದ.ಕ
ಜಿಲ್ಲಾ
ಯುವ
ಜನತಾದಳ
ಜಿಲ್ಲಾಧ್ಯಕ್ಷರಾದ
ಅಕ್ಷಿತ್
ಸುವರ್ಣ
ನೇತೃತ್ವದಲ್ಲಿ
ಪ್ರಸಿದ್ಧ
ದರ್ಗಾ,
ವಿಲಾಗ್ರಿಸ್
ಚರ್ಚ್
ಗಳಲ್ಲೂ
ಪ್ರಾರ್ಥನೆ
ನೇರವೇರಿತು
ಇದೇ ಸಂದರ್ಭದಲ್ಲಿ ರಾಜ್ಯ ನಾಯಕರುಗಳಾದ ಗೋಪಾಲಕೃಷ್ಣ ಅತ್ತಾವರ, ಪೈಜಲ್, ರತ್ನಕರ್ ಸುವರ್ಣ, ನಾಸಿರ್, ಜಿಲ್ಲಾ ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ, ಜಿಲ್ಲಾ ಯುವ ಸಂಘಟನಾ ಕಾರ್ಯದರ್ಶಿ ಅರ್ಷಕ್ ಇಸ್ಮಾಯಿಲ್, ಜಿಲ್ಲಾ ಯುವ ಕಾರ್ಯದರ್ಶಿ ಡೇಸ್ಮಂಡ್, ಹಿತೇಶ್ ರೈ, ವಿಧ್ಯಾರ್ಥಿ ನಾಯಕರಾದ ಸೀನಾನ್, ತೇಜಸ್ ನಾಯಕ್, ಲೋಯ್ಡ್ ಮುಲ್ಕಿ, ಉಪಸ್ಥಿತರಿದ್ದರು.