ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಯುವರಾಜನಿಗೆ ತಾತನ ಹೆಸರಿಡಲು ಒತ್ತಾಯ

By Yashaswini
|
Google Oneindia Kannada News

ಮೈಸೂರು, ಡಿಸೆಂಬರ್ 11 : ದಿ. ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್, ಸಂಸ್ಮರಣೆ ಪ್ರಯುಕ್ತ ನಂಜನಗೂಡು ರಸ್ತೆಯ ಮಧುವನದಲ್ಲಿರುವ ಶ್ರೀಕಂಠದತ್ತ ಒಡೆಯರ್ ಸಮಾಧಿಗೆ ಮೈಸೂರಿನ ಅರಸು ಮಂಡಳಿ ಸಭಾ ಹಾಗೂ ಸಾರ್ವಜನಿಕರಿಂದ ಶ್ರೀಕಂಠ ದತ್ತ ಒಡೆಯರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ ಗೌರವ ಸಲ್ಲಿಸಲಾಯಿತು.

ಅಜ್ಜಿ, ರಾಜಮಾತೆ ಮಡಿಲಲ್ಲಿ ಪವಡಿಸುತ್ತಿರುವ ಮುದ್ದು ರಾಜಕುಮಾರಅಜ್ಜಿ, ರಾಜಮಾತೆ ಮಡಿಲಲ್ಲಿ ಪವಡಿಸುತ್ತಿರುವ ಮುದ್ದು ರಾಜಕುಮಾರ

ಶ್ರೀಕಂಠ ದತ್ತ ಒಡೆಯರ್ ತಮ್ಮ ಕೊನೇ ದಿನಗಳನ್ನು ನ್ಯಾಯಾಲಯಕ್ಕೆ ಅಲೆದು ಜೀವನ ಸವೆಸಿದರು. ಆದರೆ, ಸರ್ಕಾರ ಮಾತ್ರ ಯಾವುದೇ ಸಹಾಯ ಮಾಡಲಿಲ್ಲ. ಒಂದು ಕಡೆ ನೋವು ಮತ್ತೊಂದು ಕಡೆ ಸಂತಸವಿದೆ. ಅವರ ಮನೆತನದವರು ಮಾಡಿದ ಸೇವೆಯನ್ನು ಪರಿಗಣಿಸಿ ಮೈಸೂರಿನ ಪ್ರಮುಖ ರಸ್ತೆಗಳಿಗೆ ಹಾಗೂ ಮೈಸೂರು ವಿವಿಗೆ ರಾಜರ ಹೆಸರಿಡಬೇಕು ಎಂದು ಅರಸು ಮಂಡಳಿ ಸಭಾದ ಕಾಂತರಾಜೇ ಅರಸ್ ಸರ್ಕಾರವನ್ನು ಒತ್ತಾಯಿಸಿದರು.

Grandpa name for Mysuru prince?

ಮಗುವಿಗೂ ತಾತನ ಹೆಸರಿಡಲು ಒತ್ತಾಯ :
ಇತ್ತ ಆರು ದಶಕಗಳ ಬಳಿಕ ರಾಜಮನೆತನಕ್ಕೆ ಪುತ್ರ ಸಂತಾನವಾಗಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಶಿಕಾ ಒಡೆಯರ್ ದಂಪತಿಗೆ ಗಂಡು ಮಗು ಜನಿಸಿದೆ. ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್ ನಿಧನರಾಗಿ ಇಂದಿಗೆ ನಾಲ್ಕು ವರ್ಷವಾಗಿದೆ. ಹಾಗಾಗಿ ತಾತನ ನೆನಪಿಗಾಗಿ ಅವರ ಹೆಸರಿಡಬೇಕೆಂದು ಒತ್ತಾಯಿಸಿದರು.

English summary
Mysuru prince named after grand pa urged in srikantadatta narasimharaja wadiyar sansmaran. Urs Mandali Sabha and the people of Mysuru paid floral tributes and prayers to the portrait of late Srikantadatta Narasimharaja Wadiyar at his tomb at Madhuvana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X