ಪ್ರವಾಹ ಪೀಡಿತರಿಗೆ ಗಣಪತಿ ಸಚ್ಚಿದಾನಂದ ಆಶ್ರಮದಿಂದ 10 ಲಕ್ಷ ದೇಣಿಗೆ
ಮೈಸೂರು, ಆಗಸ್ಟ್ 24 : ಕೊಡಗು ಪ್ರವಾಹ ಪೀಡಿತರ ನೆರವಿಗೆ ಗಣಪತಿ ಸಚ್ಚಿದಾನಂದ ಆಶ್ರಮದಿಂದ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಲಾಯಿತು.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಗಣಪತಿ ಸಚ್ಚಿದಾನಂದ ಅವಧೂತ ದತ್ತ ಪೀಠ ಟ್ರಸ್ಟ್ ನಿಂದ 5 ಲಕ್ಷ ರೂ. ಮತ್ತು ಮಂಗಳಾರತಿ, ಪೂಜೆಗಳಿಂದ ಸಂಗ್ರಹವಾದ 5 ಲಕ್ಷ ರೂ. ಸೇರಿ ಒಟ್ಟು 10 ಲಕ್ಷ ರೂ.ಗಳನ್ನು ನೀಡಲಾಗಿದೆ.
1 ತಿಂಗಳ ಸಂಬಳ ಸಿಎಂ ಪರಿಹಾರ ನಿಧಿಗೆ ಕೊಟ್ಟ ಬಿಜೆಪಿ ಶಾಸಕರು
ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರಿಗೆ ಪರಿಹಾರದ ಚೆಕ್ ನೀಡಿದರು. ಈ ವೇಳೆ ಮಾತನಾಡಿದ ಶ್ರೀಗಳು, ಇತ್ತೀಚಿನ ದಿನಗಳಲ್ಲಿ ಭೂಮಿ ಅಪಾಯದಲ್ಲಿದೆ.
ಭೂಕಂಪ, ಸುನಾಮಿ, ಪ್ರವಾಹ, ಅತಿವೃಷ್ಟಿಗಳಿಂದ ಮನುಕುಲ ತತ್ತರಿಸುತ್ತಿದೆ. ಕೊಡಗಿನಲ್ಲಿ ಅತಿವೃಷ್ಟಿಗೆ ಅಪಾರ ಬೆಳೆನಷ್ಟ, ಪ್ರಾಣ ನಷ್ಟವಾಗಿದೆ. ಎಲ್ಲಾ ನಾಗರಿಕರು ಕೊಡಗಿನ ಜನತೆಯ ಪರವಾಗಿ ನಿಲ್ಲುವುದು ಅವಶ್ಯವಾಗಿದೆ ಎಂದರು.
ಕೇರಳಕ್ಕೊಂದು ಕರ್ನಾಟಕಕ್ಕೊಂದು ನೀತಿ: ಕೇಂದ್ರದ ವಿರುದ್ಧ ಪರಂ ಆಕ್ರೋಶ
ಮುಂದುವರೆದು ಮಾತನಾಡಿದ ಅವರು, ಕೊಡಗು ಜಿಲ್ಲೆ ಮೊದಲಿನಂತೆ ಸಮೃದ್ಧಿಯಾಗಿ ಬೆಳೆಯಲಿ. ಕೊಡಗಿನ ಅಭಿವೃದ್ಧಿಗೆ ಕೈ ಜೋಡಿಸುತ್ತಿರುವುದು ಭಾತೃತ್ವದ ಸಂಕೇತವನ್ನು ಸಾರುತ್ತಿದೆ ಎಂದರು.