ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ ಅಪಘಾತ
ಮೈಸೂರು, ಜನವರಿ 9 : ಮೈಸೂರಿಗೆ ತೆರಳುವ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನ ಮಂಡ್ಯದ ಶ್ರೀರಂಗಪಟ್ಟಣದ ಗೌಡಹಳ್ಳಿ ಬಳಿ ಅಪಘಾತಕ್ಕೀಡಾಗಿದೆ.
ಕೆಆರ್ ಮಾರ್ಕೆಟ್ ಬಳಿ, ವೃದ್ಧೆಯ ಕಾಲ ಮೇಲೆ ಹರಿದ ಬಿಎಂಟಿಸಿ ಬಸ್
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಸಿದ್ದರಾಮಯ್ಯರವರ ಕಾರನ್ನು ಹಿಂಬಾಲಿಸಿಕೊಂಡು ಬರುವಾಗ ಒಂದರ ಹಿಂದೆ ಒಂದರಂತೆ ನಾಲ್ಕು ವಾಹನಗಳಿಗೆ ಸರಣಿ ಅಪಘಾತವಾಗಿದೆ. ಮೊದಲಿಗೆ ಸಿದ್ದರಾಮಯ್ಯ ಅವರನ್ನು ಫಾಲೋ ಮಾಡುತ್ತಿದ್ದ ಕಾರಿಗೆ ಸಣ್ಣದಾಗಿ ಅಪಘಾತ ಸಂಭವಿಸಿದೆ. ಬಳಿಕ ಬೇರೆ ಕಾರುಗಳು ಸೇರಿದಂತೆ ನಾಲ್ಕು ವಾಹನಗಳಿಗೆ ಅಪಘಾತ ಸಂಭವಿಸಿದೆ.
ಈ ಅಪಘಾತದಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಎಲ್ಲಾ ವಾಹನಗಳಿಗೆ ಸಣ್ಣಪುಟ್ಟ ಡ್ಯಾಮೇಜ್ ಆಗಿದೆ. ಬೆಂಗಳೂರು- ಮೈಸೂರು ಹೆದ್ದಾರಿಯಾದ್ದರಿಂದ ತಕ್ಷಣ ಬ್ರೇಕ್ ಹಾಕಿದ್ದರಿಂದ ಬೇರೆ ಸರಣಿ ಅಪಘಾತವಾಗಿದೆ ಎಂದು ಹೇಳಲಾಗುತ್ತಿದೆ.
Comments
English summary
Former CM Siddaramaiah escort vehicle accident at gowdahalli near Srirangapatna.
Story first published: Wednesday, January 9, 2019, 15:13 [IST]