ರೈತಗೀತೆಗೆ ಅವಮಾನ, ಸಚಿವ ಮಹದೇವಪ್ಪಗೆ ವೇದಿಕೆಯಲ್ಲೇ ಅನ್ನದಾತರ ತರಾಟೆ
ಮೈಸೂರು, ಡಿಸೆಂಬರ್ 27 : ನಗರದ ಸ್ಕೌಟ್ಸ್ - ಗೈಡ್ಸ್ ಮೈದಾನದಲ್ಲಿ ನಡೆದ ಸಿರಿಧಾನ್ಯ ಮೇಳ ಉದ್ಘಾಟನೆಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ.ಮಹದೇವಪ್ಪ ಅವರು ರೈತಗೀತೆ ಹಾಡುವಾಗ ಎದ್ದು ನಿಲ್ಲಲಿಲ್ಲ. ಹಾಗೂ ಆ ವೇಳೆಯಲ್ಲಿ ಕುಳಿತಿದ್ದರು ಎಂದು ಖಂಡಿಸಿ, ರೈತರು ಸಚಿವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಬೆಂಗಳೂರು ರಾಜಕೀಯ : ಮಹದೇವಪ್ಪ ಚಿತ್ತ ರಾಮನ್ ನಗರದತ್ತ!
ಮಾಗಿ ಉತ್ಸವ ಪ್ರಯುಕ್ತ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದ್ದು, ಮೇಳದಲ್ಲಿ ಮಂಡ್ಯ, ಚಾಮರಾಜನಗರ, ರಾಮನಗರ, ಮೈಸೂರು ಜಿಲ್ಲೆಗಳ ರೈತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರೈತಗೀತೆಯನ್ನು ಹಾಡಿಸಲಾಗಿತ್ತು. ಈ ವೇಳೆ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನಾ, ಸಿಚವ ಮಹದೇವಪ್ಪ, ಮೇಯರ್ ಎಂ.ಜೆ ರವಿಕುಮಾರ್ ಎದ್ದು ನಿಂತಿಲ್ಲ.
ಜನ ಪ್ರತಿನಿಧಿಗಳ ಈ ನಡವಳಿಕೆಯಿಂದ ರೈತಗೀತೆಗೆ ಅವಮಾನ ಮಾಡಿದ್ದಾರೆ. ಹಾಗೂ ಅಗೌರವ ತೋರದ್ದಾರೆ ಎಂದು ಆರೋಪಿಸಿ ತರಾಟೆಗೆ ತೆಗೆದುಕೊಂಡ ರೈತರು, 'ನಿಮಗೆ ರೈತರೆಂದರೆ ಅಸಡ್ಡೆಯೇನ್ರಿ, ಎದ್ದೇಳ್ರಿ ಮೇಲೆ' ಎಂದರು. ಅಲ್ಲದೇ ರೈತರಿಗೆ ಕೊಡುವ ಗೌರವ ಇದೇನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.