ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸಕೋಟೆಯಲ್ಲಿ ಸಾಲಬಾಧೆಗೆ ಬೆಂಕಿಹಚ್ಚಿಕೊಂಡು ರೈತ ಆತ್ಮಹತ್ಯೆ

|
Google Oneindia Kannada News

ಮೈಸೂರು, ಡಿಸೆಂಬರ್ 20 : ಸಾಲಭಾದೆ ತಾಳಲಾರದೆ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಕೆ.ಆರ್.ನಗರ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ವೇಣುಗೋಪಾಲ್(50) ಆತ್ಮಹತ್ಯೆಗೆ ಶರಣಾದ ರೈತ. ಮೃತ ರೈತ ವೇಣುಗೋಪಾಲ್ ಕೆ.ಆರ್.ನಗರ ಕಾರ್ಪೂರೇಷನ್ ಬ್ಯಾಂಕಿನಲ್ಲಿ ಸುಮಾರು 2 ಲಕ್ಷ ಮತ್ತು 3 ಲಕ್ಷ ಕೈಸಾಲ ಮಾಡಿಕೊಂಡಿದ್ದರು. ಈ ನಡುವೆ 2 ಎಕರೆ ಜಮೀನಿನಲ್ಲಿ ರಾಗಿ, ಹುರಳಿ ಸೇರಿದಂತೆ ಇನ್ನಿತರೆ ಬೆಳೆ ಬೆಳೆದಿದ್ದರು ಎನ್ನಲಾಗಿದೆ.

Farmer committed suicide in Mysuru

ಕಟಾವು ಮಾಡಿದ ಕಬ್ಬು ಕೊಳ್ಳದ ಕಾರ್ಖಾನೆ ಎದುರು ವಿಷ ಸೇವಿಸಿದ ರೈತ ಸಾವುಕಟಾವು ಮಾಡಿದ ಕಬ್ಬು ಕೊಳ್ಳದ ಕಾರ್ಖಾನೆ ಎದುರು ವಿಷ ಸೇವಿಸಿದ ರೈತ ಸಾವು

ತಾನು ಬೆಳೆದ ಬೆಳೆ ನಷ್ಟವಾದ ಹಿನ್ನಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ವೇಣುಗೋಪಾಲ್ ಆತ್ಮಹತ್ಯೆಗೆ ಯತ್ನಿಸಿದರು. ಕೂಡಲೇ ಅವರನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಗುರುವಾರ ವೇಣುಗೋಪಾಲ್ ಸಾವನ್ನಪ್ಪಿದ್ದಾನೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Mysuru k r nagara taluk farmer venugopal commit suicide on the reason of loan. Former who has 5 lakh loan at bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X