ಜೋಡಿ ಕೊಲೆ : ಜೆಡಿಎಸ್ ನಗರಸಭಾ ಸದಸ್ಯನಿಗೆ ಜೀವಾವಧಿ ಶಿಕ್ಷೆ
ಮೈಸೂರು, ಫೆಬ್ರವರಿ 27 : ಹುಣಸೂರಿನ ತೋಟದ ಮನೆಯೊಂದರಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರಸಭಾ ಸದಸ್ಯ ಅವ್ವಾ ಮಾದೇಶ ಮತ್ತು ಸಹೋದರ ಮಂಜುನಾಥ್ ಸೇರಿದಂತೆ 8 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಸುಮಾರು
ಎಂಟು
ವರ್ಷಗಳ
ಕಾಲ
ಮೈಸೂರು
ಜಿಲ್ಲಾ
ನ್ಯಾಯಾಲಯದಲ್ಲಿ
ಪ್ರಕರಣದ
ವಿಚಾರಣೆ
ನಡೆಯಿತು.
ಆರೋಪ
ಸಾಬೀತಾದ
ಹಿನ್ನಲೆಯಲ್ಲಿ
ಜಿಲ್ಲಾ
ನ್ಯಾಯಾಲಯದ
ನ್ಯಾಯಾಧೀಶರಾದ
ವಿಜಯ್
ಕುಮಾರ್
ಅವರು
ಶುಕ್ರವಾರ
ಮಧ್ಯಾಹ್ನ
ಶಿಕ್ಷೆಯನ್ನು
ಪ್ರಕಟಿಸಿದರು.
[ಮಣಿಪಾಲ್
ಗ್ಯಾಂಗ್
ರೇಪ್
ಕೇಸ್
:
ಮೂವರಿಗೆ
ಜೀವಾವಧಿ
ಶಿಕ್ಷೆ]
ಹಾಲಿ ನಗರ ಪಾಲಿಕೆ ಸದಸ್ಯ : ಮೈಸೂರು ನಗರ ಪಾಲಿಕೆಯ 32ನೇ ವಾರ್ಡಿನ ಜೆಡಿಎಸ್ನ ಹಾಲಿ ಸದಸ್ಯ ಮಾದೇಶ ಅಲಿಯಾಸ್ ಅವ್ವ ಮಾದೇಶ ಹಾಗೂ ಸಹೋದರ ಮಂಜುನಾಥ್ ಸೇರಿದಂತೆ ಇತರ 6 ಮಂದಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. [ಆರುಷಿ ಹತ್ಯೆ: ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ]
ಪ್ರಕರಣದ ಸಂಬಂಧ ಎರಡು ಅವಧಿಯ ಕಠಿಣ ಶಿಕ್ಷೆ (10ವರ್ಷ) ವಿಧಿಸಲಾಗಿದೆ. ಇದರೊಂದಿಗೆ ಮೊದಲ ಆರೋಪಿಗೆ 3 ಲಕ್ಷ ರೂ. ದಂಡ ಹಾಗೂ ಉಳಿದ ಆರೋಪಿಗಳಿಗೆ ತಲಾ 1 ಲಕ್ಷ ದಂಡ ವಿಧಿಸಲಾಗಿದ್ದು, ದಂಡವನ್ನು ಹತ್ಯೆಯಾದ ಇಬ್ಬರ ಕುಟುಂಬಗಳಿಗೆ ಪರಿಹಾರವಾಗಿ ನೀಡುವಂತೆ ಆದೇಶ ನೀಡಲಾಗಿದೆ. [ಬಾಲಕಿಯ ಕೆಡಿಸಿದ ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ]
ಪ್ರಕರಣವೇನು? : ಹುಣಸೂರಿನಲ್ಲಿ 2008ರಲ್ಲಿ ಜೋಡಿ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಮಾದೇಶ ಅಲಿಯಾಸ್ ಅವ್ವಾ ಮಾದೇಶ ಸೇರಿದಂತೆ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ನಂತರ ಅವ್ವಾ ಮಾದೇಶ ಸೇರಿದಂತೆ ಇತರರು ಜಾಮೀನು ಪಡೆದು ಹೊರಬಂದಿದ್ದರು.
ಆ ನಂತರ ನಡೆದ ಮೈಸೂರು ನಗರಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾದೇಶ ಅವರು ಗೆಲುವು ಸಾಧಿಸಿದ್ದರು. ಆದರೆ, ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಈಗ ವಿಚಾರಣೆ ಪೂರ್ಣಗೊಂಡಿದ್ದು, ಶಿಕ್ಷೆ ಪ್ರಕಟವಾಗಿದೆ.