ಸಾಲಮನ್ನಾ ಬಗ್ಗೆ ಊಹಾಪೋಹ ನಂಬಬೇಡಿ: ಕುಮಾರಸ್ವಾಮಿ
ಮೈಸೂರು, ಮೇ 23: ಸಾಲಮನ್ನಾ ಬಗ್ಗೆ ಊಹಾಪೋಹದ ಮಾತುಗಳನ್ನು ರೈತರು ನಂಬಬೇಡಿ, ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಧನಾತ್ಮಕ ನಿರ್ಣಯ ಕೈಗೊಳ್ಳುತ್ತೇವೆ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
LIVE: ಎಚ್ ಡಿ ಕುಮಾರಸ್ವಾಮಿ ಪದಗ್ರಹಣಕ್ಕೆ ಸಕಲ ಸಿದ್ಧತೆ
ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನನ್ನ ಯೋಜನೆ ಬೇರೆ ಇದೆ, ಆರ್ಥಿಕ ತಜ್ಞರ ಚಿಂತನೆ ಬೇರೆ ಇದೆ, ಹಾಗಾಗಿ ಚರ್ಚಿಸಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ಸಿಎಂ ಆಗುತ್ತಿರುವುದು ಸಂಪೂರ್ಣ ತೃಪ್ತಿ ತಂದಿಲ್ಲ: ಕುಮಾರಸ್ವಾಮಿ
ರಾಜ್ಯದ ರೈತರ ಹಿತ ಕಾಪಾಡಿಯೇ ಸಿದ್ದ ಎಂದು ಭರವಸೆ ನೀಡಿದ ಅವರು, ಇಸ್ರೇಲ್ಗಿಂತಲೂ ಉತ್ತಮ ಮಾದರಿ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಅಳವಡಿಸುವುದಾಗಿ ಅವರು ಹೇಳಿದರು.
ಮತ್ತೆ ಜನತಾದರ್ಶನ ಪ್ರಾರಂಭ ಮಾಡುವುದಾಗಿ ಹೇಳಿದ ಅವರು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದಲೇ ಜನರು ನನ್ನನ್ನು ಭೇಟಿ ಆಗಬಹುದು ಅದಕ್ಕೆ ಪೂರ್ವಾನುಮತಿಯ ಅವಕಾಶವೂ ಇಲ್ಲ ಎಂದರು, ಗ್ರಾಮ ವಾಸ್ಥವ್ಯ ಮಾಡುವುದಾಗಿಯೂ ಅವರು ಹೇಳಿದರು.