ಮೈಸೂರಲ್ಲಿ ಅರಸು ಜನ್ಮಶತಮಾನೋತ್ಸವಕ್ಕೆ ಚಾಲನೆ
ಮೈಸೂರು, ಆಗಸ್ಟ್ 17: ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಆಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಸ್ಟ್ 20ರಂದು ಮೈಸೂರು ಜಿಲ್ಲೆಯಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಆರ್ ಎಲ್ ಜಾಲಪ್ಪ ಅವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ಕಾರದ ವತಿಯಿಂದ ರಾಜ್ಯದೆಲ್ಲೆಡೆ ಅರಸು ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಆಚರಿಸಲಾಗುತ್ತದೆ.
ಆ.
20ರಂದು
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಜನ್ಮ
ಶತಮಾನೋತ್ಸವ
ಆಚರಣೆಗೆ
ಚಾಲನೆ
ನೀಡಲಿದ್ದು,
ದೇವರಾಜ
ಅರಸು
ನಂತರದ
ಎಲ್ಲಾ
ಮಾಜಿ
ಮುಖ್ಯಮಂತ್ರಿಗಳನ್ನು
ಈ
ಸಮಾರಂಭಕ್ಕೆ
ಆಹ್ವಾನಿಸಲಾಗುತ್ತದೆ.
ಅರಸು
ಕುಟುಂಬದವರು
ಸಹ
ಭಾಗವಹಿಸಲಿದ್ದಾರೆ
ಎಂದು
ಶ್ರೀನಿವಾಸ
ಪ್ರಸಾದ್
ತಿಳಿಸಿದರು.
*
ಆಗಸ್ಟ್
20
ರಂದು
10.30ಕ್ಕೆ
ಮುಖ್ಯಮಂತ್ರಿ
ಸಿದ್ದರಾಮಯ್ಯನವರು
ಮಂಡಕಳ್ಳಿ
ವಿಮಾನ
ನಿಲ್ದಾಣಕ್ಕೆ
ಆಗಮಿಸಲಿದ್ದಾರೆ.
*
11.15ಕ್ಕೆ
ಹುಣಸೂರಿನಲ್ಲಿರುವ
ದೇವರಾಜ
ಅರಸು
ಅವರ
ಪ್ರತಿಮೆಗೆ
ಮಾಲಾರ್ಪಣೆ
ಮಾಡಲಿದ್ದಾರೆ.
*
11.30ಕ್ಕೆ
ಡಿ.
ದೇವರಾಜ
ಅರಸು
ಭವನ
ನಿರ್ಮಾಣಕ್ಕೆ
ಶಂಕುಸ್ಥಾಪನೆ
ನೆರವೇರಿಸಲಿದ್ದಾರೆ.
*
12ಕ್ಕೆ
ಅರಸುರವರ
ಸಮಾಧಿಗೆ
ಪುಷ್ಪಾರ್ಚನೆ
ಹಾಗೂ
ಕಲ್ಲಹಳ್ಳಿ
ಗ್ರಾಮದ
ದತ್ತು
ಸ್ವೀಕಾರ
ಘೋಷಣೆ
ಮಾಡಲಿದ್ದಾರೆ.
*
ಮಧ್ಯಾಹ್ನ
1ಕ್ಕೆ
ಮೈಸೂರಿಗೆ
ಆಗಮಿಸಿ
3
ಗಂಟೆಗೆ
ಮಾನಸ
ಗಂಗೋತ್ರಿಯ
ಬಯಲು
ರಂಗಮಂದಿರಲ್ಲಿ
ಏರ್ಪಡಿಸಲಾಗಿರುವ
ಅರಸು
ಶತಮಾನೋತ್ಸವ
ಮತ್ತು
ಡಿ.
ದೇವರಾಜ
ಅರಸು
ಪ್ರಶಸ್ತಿ
ಪ್ರದಾನ
ಸಮಾರಂಭದಲ್ಲಿ
ಭಾಗವಹಿಸಲಿದ್ದಾರೆ.
ಮೈಸೂರು ರಾಜ್ಯವನ್ನು 'ಕರ್ನಾಟಕ' ಎಂದು ಮರು ನಾಮಕರಣ ಮಾಡಲು ಕಾರಣರಾದವರಲ್ಲಿ ದೇವರಾಜ್ ಅರಸು ಅವರು ಪ್ರಮುಖರು. ಅರಸು ಅವರು ಕೈಗೊಂಡ ಭೂ ಸುಧಾರಣೆ, ದಲಿತರ ಏಳಿಗೆಗಾಗಿ ಕೈಗೊಂಡ ಕ್ರಮಗಳು ಅನುಕರಣೀಯ. ಅರಸು ಅವರ ಬಗ್ಗೆ ಒಂದು ಮ್ಯೂಸಿಯಂ ಸ್ಥಾಪಿಸಲಾಗುವುದು, ಈ ವರ್ಷ ಅವರ ಜೀವನ -ಸಾಧನೆ ಕುರಿತ ಕೃತಿಯನ್ನು ರಚಿಸಿ ವಿವಿಧ ಭಾಷೆಗಳಿಗೆ ಅನುವಾದಿಸಲಾಗುವುದು ಎಂದು ಸಚಿವ ಶ್ರೀನಿವಾಸ್ ಪ್ರಸಾದ್ ಹೇಳಿದರು.