ಮೈಸೂರು : ಸತ್ತ ಕಾಡಾನೆಯ ದಂತ ಅಪಹರಣ
ಮೈಸೂರು, ಜೂನ್ 22 : ಕಂದಕದಲ್ಲಿ ಬಿದ್ದು ಸಾವನ್ನಪ್ಪಿದ್ದ ಕಾಡಾನೆಯ ದಂತವನ್ನು ಕಳ್ಳರು ಅಪಹರಿಸಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ. ದಂತಕ್ಕಾಗಿಯೇ ಆನೆ ಹತ್ಯೆ ನಡೆದಿದೆಯೇ ಎಂದು ತನಿಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ನಾಗರಹೊಳೆ
ರಾಷ್ಟ್ರೀಯ
ಉದ್ಯಾನ
ವ್ಯಾಪ್ತಿಯಲ್ಲಿ
ಎರಡು
ಕಾಡಾನೆಗಳು
ಸಾವನ್ನಪ್ಪಿದ್ದು,
ಈ
ಪೈಕಿ
ಒಂದು
ಕಾಡಾನೆಯ
ದಂತವನ್ನು
ಅಪಹರಿಸಲಾಗಿದೆ.
ಒಂದು
ವಾರದ
ಹಿಂದೆಯೇ
ಸಾವನ್ನಪ್ಪಿರುವ
ಶಂಕೆ
ಇದ್ದು,
ದೇಹ
ಕೊಳತ
ಸ್ಥಿತಿಯಲ್ಲಿದೆ.
[ಎಚ್ಡಿ
ಕೋಟೆ
ಬಳಿ
ವಿದ್ಯುತ್
ತಂತಿ
ತಗುಲಿ
ಸಲಗ
ಸಾವು]
ಕಲ್ಲಹಳ್ಳ ವಲಯದ ಕಾರ್ಮಾಡು ಬಳಿಯಿಂದ ನಗರದತ್ತ ಬರುವ ಸಲುವಾಗಿ ಸುಮಾರು 35 ವರ್ಷದ ಸಲಗ ಕಂದಕ ದಾಟಲು ತಡೆಗೋಡೆಗೆ ಅಳವಡಿಸಿದ್ದ ಸಿಮೆಂಟ್ ಕಂಬದ ಮೇಲೆ ಹತ್ತಿ ಹೊರಬರಲು ಪ್ರಯತ್ನಿಸಿದ್ದು ಈ ಸಂದರ್ಭ ಜಾರಿ ಕಂದಕದೊಳಕ್ಕೆ ಬಿದ್ದು ಮೃತಪಟ್ಟಿದ್ದರೆ, ಮತ್ತೊಂದು ಸುಮಾರು 40 ವರ್ಷದ ಕಾಡಾನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಲ್ಲಹಳ್ಳ ವಲಯದ ತಟ್ಟೆಕಟ್ಟೆ ಬೀಟ್ನಲ್ಲಿ ಸಾವನ್ನಪ್ಪಿದೆ. [ಮೈಸೂರು ದಸರಾ ಮಾವುತರ ಕರಾಳ ಬದುಕಾ ಕಂಡೀರಾ?]
ಕಾಡಾನೆ ಸ್ವಾಭಾವಿಕವಾಗಿ ಸಾವನ್ನಪ್ಪಿದ್ದು, ಸತ್ತ ಬಳಿಕ ದಂತವನ್ನು ಕತ್ತರಿಸಿ ಸಾಗಿಸಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಶ್ವಾನದಳ ಕರೆಸಿ ಪರಿಶೀಲನೆ ನಡೆಸಲಾಯಿತಾದರೂ ಯಾವುದೇ ಸುಳಿವು ಸಿಗಲಿಲ್ಲ. ಎರಡು ಕಾಡಾನೆಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ಅಂತ್ಯಕ್ರಿಯೆ ನೆರವೇರಿಸಲಾಗಿದೆ. [ಮೈಸೂರು ಮೃಗಾಲಯದ 'ಟಿಂಬೋ' ಇನ್ನಿಲ್ಲ]