ಚಿತ್ರಗಳು : ಮೈಸೂರಲ್ಲಿ ಪೊಲೀಸರ ಪಥಸಂಚಲನ
ಮೈಸೂರು, ಮಾರ್ಚ್ 15 : ವಿಶ್ವಹಿಂದೂ ಪರಿಷತ್ ಮತ್ತು ಬಿಜೆಪಿ ಕಾರ್ಯಕರ್ತ ರಾಜು ಅವರ ಹತ್ಯೆ ಬಳಿಕ ಉದ್ವಿಗ್ನಗೊಂಡಿದ್ದ ಮೈಸೂರು ನಗರ ಸಹಜ ಸ್ಥಿತಿಯತ್ತ ಮರಳಿದೆ. ಮಂಗಳವಾರ ವ್ಯಾಪಾರ ವಹಿವಾಟು ಎಂದಿನಂತೆ ಸಾಗಿದ್ದು, ಪ್ರವಾಸಿಗರು ನಗರಕ್ಕೆ ಆಗಮಿಸಿದ್ದಾರೆ. [ಕರ್ನಾಟಕದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ: ಪ್ರತಾಪ್ ಸಿಂಹ]
ಭಾನುವಾರ
ಸಂಜೆ
ರಾಜು
ಅವರನ್ನು
ದುಷ್ಕರ್ಮಿಗಳು
ಹತ್ಯೆ
ಮಾಡಿದ್ದರು.
ರಾಜಯ
ಹತ್ಯೆ
ಖಂಡಿಸಿ
ಸೋಮವಾರ
ಬಿಜೆಪಿ
ಮತ್ತು
ಹಿಂದೂಪರ
ಸಂಘಟನೆಗಳು
ಕರೆ
ನೀಡಿದ್ದ
ಬಂದ್
ವೇಳೆ
ಹಿಂಸಾಚಾರ
ನಡೆದಿತ್ತು.
ಮಂಗಳವಾರ
ನಗರದ
ಪರಿಸ್ಥಿತಿ
ಸಹಜ
ಸ್ಥಿತಿಗೆ
ಬಂದಿದೆ.
[ಮೈಸೂರಲ್ಲಿ
ರಾಜು
ಹತ್ಯೆ
:
ಯಾರು,
ಏನು
ಹೇಳಿದರು?]
ಕ್ಯಾತಮಾರನಹಳ್ಳಿಯಲ್ಲಿ
ಸೋಮವಾರ
ಸಂಜೆ
ರಾಜು
ಅವರ
ಅಂತ್ಯಕ್ರಿಯೆ
ನಡೆದಿತ್ತು.
ರಾಜು
ಅವರ
ಅಂತ್ಯಕ್ರಿಯೆ
ಮುಗಿಸಿ
ಬರುತ್ತಿದ್ದ
ನೂರಾರು
ಜನರ
ಮೇಲೆ
ಕಲ್ಲು
ತೂರಾಟ
ನಡೆದಿತ್ತು.
ಮಂಗಳವಾರವೂ
ರಾಜು
ಅವರ
ಮನೆಯ
ಸುತ್ತ-ಮುತ್ತ
ಬಿಗಿ
ಪೊಲೀಸ್
ಬಂದೋಬಸ್ತ್
ಕೈಗೊಳ್ಳಲಾಗಿದೆ.
[ಬಿಜೆಪಿ
ಕಾರ್ಯಕರ್ತನ
ಕೊಲೆ,
ಕೋಮು
ಗಲಭೆ
ಎಚ್ಚರಿಕೆ]
ಉದಯಗಿರಿ,
ಎನ್.ಆರ್.ಮೊಹಲ್ಲಾ
ಹಾಗೂ
ಮಂಡಿ
ಮೊಹಲ್ಲಾ
ಪೊಲೀಸ್
ಠಾಣಾ
ವ್ಯಾಪ್ತಿಯಲ್ಲಿ
ಕ್ಷಿಪ್ರ
ಕಾರ್ಯಾಚರಣೆ
ಪಡೆ
ಹಾಗೂ
ಪೊಲೀಸರು
ಮಂಗಳವಾರ
ಪಥಸಂಚಲನ
ನಡೆಸಿದರು.
ಜನಜೀವನ
ಸಹಜ
ಸ್ಥಿತಿಗೆ
ಮರಳಿದರೂ
ನಗರದಲ್ಲಿ
ಹೆಚ್ಚಿನ
ಪೊಲೀಸರನ್ನು
ನಿಯೋಜನೆ
ಮಾಡಲಾಗಿದೆ.
[ಮೈಸೂರು
ಬಂದ್
ಹಿಂಸಾಚಾರಕ್ಕೆ
ತಿರುಗಿದ್ದು
ಹೇಗೆ?]
ಸೋಮವಾರ
ನಗರದಲ್ಲಿ
ವಾಹನ
ಸಂಚಾರ
ಸ್ಥಗಿತಗೊಂಡಿತ್ತು.
ಆದ್ದರಿಂದ,
ಮೈಸೂರು
ಅರಮನೆಗೆ
ಪ್ರವಾಸಿಗರು
ಆಗಮಿಸಿರಲಿಲ್ಲ.
ಇಂದು
ಪರಿಸ್ಥಿತಿ
ಸಹಜ
ಸ್ಥಿತಿಗೆ
ಬಂದಿದ್ದು,
ಪ್ರವಾಸಿರುವ
ಅರಮನೆಗೆ
ಹೆಚ್ಚಿನ
ಸಂಖ್ಯೆಯಲ್ಲಿ
ಆಗಮಿಸುತ್ತಿದ್ದಾರೆ.
[ಮೈಸೂರು
:
ರಾಜು
ಕೊಲೆ
ಪ್ರಕರಣದ
ತನಿಖೆ
ಸಿಸಿಬಿಗೆ]