ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಖ್ಖರ ಹತ್ಯೆ ಮಾಡಿ ಸಮರ್ಥಿಸಿಕೊಂಡ ದರಿದ್ರ ಪಕ್ಷ ಕಾಂಗ್ರೆಸ್: ಪ್ರತಾಪ್ ಸಿಂಹ

|
Google Oneindia Kannada News

ಮೈಸೂರು, ಮಾರ್ಚ್ 31: ಹಿಂದೂ ಕಾರ್ಯಕರ್ತ ರಾಜು ಕುಟುಂಬಕ್ಕೆ 5 ಲಕ್ಷ ನೀಡಿದ್ದ ಅಮಿತ್ ಶಾರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ದಿನೇಶ್ ಗುಂಡೂರಾವ್ ವಿರುದ್ಧ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಾಡ ಧ್ವಜ: ಸಿದ್ದು ಟ್ವೀಟಿಗೆ ಪ್ರತಾಪ್ ಹಾಗೂ ಪ್ರಜೆಗಳ ಪ್ರತಿಕ್ರಿಯೆನಾಡ ಧ್ವಜ: ಸಿದ್ದು ಟ್ವೀಟಿಗೆ ಪ್ರತಾಪ್ ಹಾಗೂ ಪ್ರಜೆಗಳ ಪ್ರತಿಕ್ರಿಯೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕಾರ್ಯಕರ್ತ ಸಾವಿನ ನೋವನ್ನು ಯಾವ ನೀತಿ ಸಂಹಿತೆಯೂ ಅರ್ಥ ಮಾಡಿಕೊಳ್ಳುವುದಿಲ್ಲ‌. ನಮ್ಮ ಪಕ್ಷದಿಂದಲೇ ದುಡ್ಡು ನೀಡಿದ್ದೇವೆ ಎಂದುಕೊಳ್ಳಿ ಏನು ಇವಾಗ?. ನಮ್ಮ ಮೇಲೆ ಕೇಸ್ ಹಾಕುವುದಾದರೇ ಹಾಕಿ. ಇಂತಹ ಎಷ್ಟೋ ಕೇಸ್ ನಾವು ಹಾಕಿಸಿಕೊಂಡಿದ್ದೇವೆ ಎಂದು ಆವೇಶದಿಂದ ನುಡಿದರು.

congress-is-wicked-party-which-justified-the-killings-sikhs-Pratap-simha

ರಾಜು ಹತ್ಯೆ ಮಾಡಿದ ಅಬೀಬ್ ಪಾಷಾ ಸಂಸದರೊಬ್ಬರ ಹತ್ಯೆಗೆ ಮುಂದಾಗಿದ್ದಾನೆ ಎನ್ನುವ ಮಾಹಿತಿ ಇದೆ. ಆತ ಯಾರನ್ನಾದರೂ ಹತ್ಯೆ ಮಾಡಿದರೇ ನಿಮ್ಮ ನೀತಿ ಸಂಹಿತೆ ಬಂದು ಕಾಪಾಡುತ್ತದೆಯೇ. ಎಲ್ಲಿ ಅಬೀಬ್ ಬಂದು ಕೊಲೆ ಮಾಡುತ್ತಾನೆ ಎಂಬ ಭಯದಲ್ಲಿ ಜನರು ಓಡಾಡುವಂತೆ ಆಗಿದೆ ಎಂದು ದಿನೇಶ್ ಗುಂಡುರಾವ್ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ದಲಿತ ಸಂವಾದದಲ್ಲಿ ಪ್ರತಿಭಟನೆ, ಅಮಿತ್ ಶಾಗೆ ಧಿಕ್ಕಾರಬಿಜೆಪಿ ದಲಿತ ಸಂವಾದದಲ್ಲಿ ಪ್ರತಿಭಟನೆ, ಅಮಿತ್ ಶಾಗೆ ಧಿಕ್ಕಾರ

ನಿಮ್ಮ ಸಿದ್ದರಾಮಯ್ಯ ಬಾಡೂಟ ಮಾಡಲು ಮೈಸೂರಿಗೆ ಬರುತ್ತಾರೆ. ಆದರೆ, ಒಂದು ದಿನವಾದರೂ ಮಗನನ್ನು ಕಳೆದುಕೊಂಡ ತಾಯಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ‌. ಸಿಖ್ಖರನ್ನು ಹತ್ಯೆ ಮಾಡಿ ಸಮರ್ಥಿಸಿಕೊಂಡ ದರಿದ್ರ ಪಕ್ಷ ನಿಮ್ಮದು. ನಿಮ್ಮಿಂದ ನಮಗೆ ನೀತಿಸಂಹಿತೆ ಪಾಠ ಬೇಕಿಲ್ಲ. ನಮ್ಮ ಕಾರ್ಯಕರ್ತರಿಗೆ ಮನೆಗೆ ಹೋಗೋದಕ್ಕೆ ನಮಗೆ ನೀತಿಸಂಹಿತೆ ಅಡ್ಡ ಬರೋಲ್ಲ. ಇನ್ನೊಮ್ಮೆ ಮಾತನಾಡುವಾಗ ಎಚ್ಚರದಿಂದ ಮಾತನಾಡಿ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.

English summary
MP Pratap simha took a jibe at Dinesh gundu rao, working president of KPCC who alleged that BJP President amith sha over ruled election code of condut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X