ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಮತ್ತೆ ಮುನ್ನೆಲೆಗೆ: ಸಿಎಂ ಹೇಳಿದ್ದು ಏನು?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 18: ಸಚಿವ ಡಿ.ಕೆ.ಶಿವಕುಮಾರ್‌ ಅವರು ಇಂದು ಗದಗದ ಕಾರ್ಯಕ್ರಮವೊಂದರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಹೇಳಿಕೆ ಕೊಟ್ಟದ್ದೇ ತಡ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಠಿಯಾಗಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಹೇಳಿಕೆ: ಡಿಕೆಶಿ ಮೇಲೆ ಎಂಬಿ.ಪಾಟೀಲ್ ಕಿಡಿಲಿಂಗಾಯತ ಪ್ರತ್ಯೇಕ ಧರ್ಮ ಹೇಳಿಕೆ: ಡಿಕೆಶಿ ಮೇಲೆ ಎಂಬಿ.ಪಾಟೀಲ್ ಕಿಡಿ

ಕುಮಾರಸ್ವಾಮಿ ಅವರೂ ಸಹ ಈ ಬಗ್ಗೆ ಹೇಳಿಕೆ ನೀಡಿದ್ದು, ಮೈತ್ರಿ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೈಮುಗಿದು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ ಸಚಿವ ಡಿ.ಕೆ.ಶಿವಕುಮಾರ್‌ ಕೈಮುಗಿದು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ ಸಚಿವ ಡಿ.ಕೆ.ಶಿವಕುಮಾರ್‌

ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದಲ್ಲಿ ಮೂಗು ತೂರಿಸಿ ಕಾಂಗ್ರೆಸ್‌ ಸರ್ಕಾರ ಅನುಭವಿಸಿದ ನಷ್ಟದ ಬಗ್ಗೆ ಅರಿವಿರುವ ಕುಮಾರಸ್ವಾಮಿ ಅವರು, ಈ ವಿವಾದದಿಂದ ಸಾಧ್ಯವಾದಷ್ಟೂ ದೂರವಿರಲು ನಿರ್ಧರಿಸಿದಂತಿದೆ.

coalition government did not took any decision about Lingyata religion: CM

ಧಾರ್ಮಿಕ ವಿಚಾರಗಳಲ್ಲಿನ ಸಮಸ್ಯೆಗಳಿಗೆ ಧಾರ್ಮಿಕ ಗುರುಗಳೇ ಪರಿಹಾರ ಕಂಡುಕೊಳ್ಳಬೇಕು. ಹಿಂದಿನ ಸರ್ಕಾರವು ಈ ವಿವಾದದಲ್ಲಿ ಇದೇ ತಂತ್ರ ಅನುಸರಿಸಿತ್ತು ಎಂದು ಅವರು ಹೇಳಿದರು.

ಅಧಿಕಾರಿಗಳ ವರ್ಗಾವಣೆ: ಎಚ್‌ಡಿಕೆ ಯೇ ಬಾಸ್, ಮೈತ್ರಿಗೆ ಬೀಳಲಿದೆಯೇ ಪೆಟ್ಟು?ಅಧಿಕಾರಿಗಳ ವರ್ಗಾವಣೆ: ಎಚ್‌ಡಿಕೆ ಯೇ ಬಾಸ್, ಮೈತ್ರಿಗೆ ಬೀಳಲಿದೆಯೇ ಪೆಟ್ಟು?

ಈ ವಿವಾದದ ಕುರಿತು ಡಿ.ಕೆ.ಶಿವಕುಮಾರ್‌ ನೀಡಿರು ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ ಅವರು, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ತಿಳಿಯದು. ಅದೂ ಅಲ್ಲದೆ ಧಾರ್ಮಿಕ ವಿಷಯಗಳಲ್ಲಿ ವಿವಾದಗಳನ್ನು ಎಳೆದು ತರುವುದು ತರವಲ್ಲ ಎಂದು ಅವರು ಹೇಳಿದರು.

English summary
CM Kumaraswamy told media that coalition government did not take any decision about Lingayta religion. He said he did not give statement about DK Shivakumar's opinion about Lingayata separate religion decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X