ಅಪ್ಪ ಸಿದ್ದು ಅನುಪಸ್ಥಿತಿಯಲ್ಲಿ ಮಗ ಯತೀಂದ್ರರ ದರ್ಬಾರು!
ಮೈಸೂರು, ಏಪ್ರಿಲ್ 21: ತಮ್ಮ ತಂದೆಯ ಅನುಪಸ್ಥಿತಿಯಲ್ಲಿ ಸರ್ಕಾರಿ ಅಧಿಕಾರಿಗಳ ಸಭೆ ನಡೆಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರು ವಿವಾದಕ್ಕೀಡಾಗಿದ್ದಾರೆ.
ಮೈಸೂರಿನ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಾನಾ ಇಲಾಖೆಯ ಅಧಿಕಾರಿಗಳ ಸಭೆಯನ್ನು ಅವರು ನಡೆಸಿರುವುದು ಹಲವರ ಟೀಕೆಗೆ ಕಾರಣವಾಗಿದೆ.[ಸಿದ್ದರಾಮಯ್ಯ- ಅಂಬರೀಷ್ ಭೇಟಿಯ ಹಿಂದಿನ ಗುಟ್ಟೇನು?]
ಸಿದ್ದರಾಮಯ್ಯ ಅವರು, ಶುಕ್ರವಾರ ಉಡುಪಿ ಜಿಲ್ಲೆಯ ಬಾರ್ಕೂರಿಗೆ ಭೇಟಿ ನೀಡಿದ್ದರು. ಹಾಗಾಗಿ, ಅವರು ಬೆಂಗಳೂರಿನಲ್ಲಿರಲಿಲ್ಲ. ಆದ್ದರಿಂದ ಯತೀಂದ್ರ ಅವರೇ ಸಭೆಯ ನೇತೃತ್ವ ವಹಿಸಿದ್ದರೆಂದು ಹೇಳಲಾಗಿದೆ.[ಸಿದ್ದರಾಮಯ್ಯ ಪುತ್ರ ಯತೀಂದ್ರರ 'ಮ್ಯಾಟ್ರಿಕ್ಸ್' ಹಿನ್ನಲೆ ಏನು?]
ಯಾವುದೇ ಸಾಂವಿಧಾನಿಕ ಹುದ್ದೆ ಅಥವಾ ಅಧಿಕಾರ ಇಲ್ಲದಿದ್ದರೂ, ಕೇವಲ ತಮ್ಮ ತಂದೆಯ ಅನುಪಸ್ಥಿತಿ ಇದೆ ಎಂಬ ಕಾರಣಕ್ಕೆ ಸಭೆಯ ನೇತೃತ್ವ ವಹಿಸಿರುವುದು ಸರಿಯೇ ಎಂಬ ಪ್ರಶ್ನೆ ರಾಜಕೀಯ ವಲಯದಿಂದ ಕೇಳಿಬರುತ್ತಿದೆ.[ಸಿದ್ದರಾಮಯ್ಯ ರಾಜಕೀಯ ನಿವೃತ್ತರಾಗಲ್ಲ: ಡಾ ಯತೀಂದ್ರ ಸಂದರ್ಶನ]
Comments
English summary
Cheif Minister Siddaramaiah's son Dr. Yathindra, even not having any constitutiional power, chaired the meeting of various departments's officials on April 21, 2017 in CM's Mysore residence. This has given rise to controversy.