'ತಿರುಪತಿ ಮಾದರಿಯಲ್ಲಿ ಚಾಮುಂಡಿ ಬೆಟ್ಟ ಅಭಿವೃದ್ಧಿ'
ಮೈಸೂರು, ಏಪ್ರಿಲ್ 29 : 'ಚಾಮುಂಡಿ ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಅವರಿಗೆ ತಿರುಪತಿಯ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ
ಚಾಮುಂಡಿ
ಬೆಟ್ಟದಲ್ಲಿ
ಆಯೋಜಿಸಲಾಗಿದ್ದ
ಕಾರ್ಯಕ್ರಮದಲ್ಲಿ
ವಿವಿಧ
ಮೂಲಭೂತ
ಸೌಕರ್ಯ
ಒದಗಿಸುವ
ಕಾಮಗಾರಿಗಳ
ಶಂಕುಸ್ಥಾಪನೆ
ನೆರವೇರಿಸಿ
ಅವರು
ಮಾತನಾಡಿದರು.
'ಈ
ಬಾರಿ
ಉತ್ತಮ
ಮಳೆ
ಬರಲಿ,
ರೈತರ
ಜೀವನ
ಸುಧಾರಿಸಲಿ
ಎಂದು
ತಾಯಿ
ಚಾಮುಂಡೇಶ್ವರಿಗೆ
ಪ್ರಾರ್ಥನೆ
ಸಲ್ಲಿಸಿದ್ದೇನೆ'
ಎಂದರು.
[ಚಾಮುಂಡಿ
ಬೆಟ್ಟದಲ್ಲಿ
ಇನ್ಮುಂದೆ
ವಸ್ತ್ರಸಂಹಿತೆ
ಜಾರಿ?]
'ಚಾಮುಂಡಿ ಬೆಟ್ಟಕ್ಕೆ ಧಾರ್ಮಿಕ ಹಾಗೂ ಐತಿಹಾಸಿಕ ಹಿನ್ನೆಲೆ ಇದೆ. ದಸರಾ ಹಾಗೂ ಚಾಮುಂಡಿ ಬೆಟ್ಟಕ್ಕೆ ನಿಕಟ ಸಂಪರ್ಕವಿದೆ. ದಸರಾ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದಲ್ಲಿ ವಿವಿಧ ಪೂಜೆಗಳು ನಡೆಯುತ್ತದೆ. ದೇಶ ವಿದೇಶಗಳಿಂದ ಭಕ್ತಾದಿಗಳು ದೇವಿಯ ದರ್ಶನಕ್ಕಾಗಿ ಆಗಮಿಸುತ್ತಾರೆ'. ಎಂದು ಹೇಳಿದರು. [ಚಾಮುಂಡೇಶ್ವರಿ ಜಾತ್ರೆಗೆ ಸಾಕ್ಷಿಯಾದ ಲಕ್ಷಾಂತರ ಭಕ್ತರು]
'ಕಳೆದ ಸಾಲಿನಲ್ಲಿ 18 ಲಕ್ಷ ಆದಾಯ ಚಾಮುಂಡಿ ಬೆಟ್ಟದಿಂದ ದೊರಕಿತ್ತು. ಈ ಸಾಲಿನಲ್ಲಿ ಆದಾಯ ಹೆಚ್ಚಳ ವಾಗಿದ್ದು ಚಾಮುಂಡಿ ಬೆಟ್ಟದಲ್ಲಿ 21 ಲಕ್ಷ ರೂ. ಆದಾಯ ದೊರೆತ್ತಿದೆ. ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸುವುದರಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು' ಎಂದರು. [ವೆಬ್ ಲೋಕಕ್ಕೆ ಕಾಲಿಟ್ಟ ಬೆಟ್ಟದ ತಾಯಿ ಚಾಮುಂಡಿ]
80
ಕೋಟಿ
ವೆಚ್ಚ
:
'ಚಾಮುಂಡಿ
ಬೆಟ್ಟಕ್ಕೆ
ಪ್ರವಾಸಿಗರ
ಸಂಖ್ಯೆ
ಹೆಚ್ಚಳವಾಗುತ್ತಿದೆ.
ಅವರಿಗೆ
ತಿರುಪತಿಯ
ರೀತಿಯಲ್ಲಿ
ಸೌಲಭ್ಯಗಳನ್ನು
ಕಲ್ಪಿಸಲಾಗುತ್ತದೆ.
ಮೊದಲ
ಹಂತದಲ್ಲಿ
80
ಕೋಟಿ
ರೂ.
ಅಂದಾಜು
ವೆಚ್ಚದಲ್ಲಿ
ವಾಹನ
ನಿಲುಗಡೆಗೆ
ಬಹುಮಹಡಿಗಳ
ಕಟ್ಟಡ
ನಿರ್ಮಾಣ,
ವಾಣಿಜ್ಯ
ಸಮುಚ್ಚಯ
ಕಟ್ಟಡ
ನಿರ್ಮಾಣ
ಹಾಗೂ
ಶೌಚಾಲಯಗಳ
ನಿರ್ಮಾಣ
ಮಾಡಲಾಗುವುದು'
ಎಂದು
ತಿಳಿಸಿದರು.
'ವಾಹನ ನಿಲುಗಡೆ ಕಟ್ಟಡ ನಿರ್ಮಾಣದ ಬಳಿಕ ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ನೆರಳು ಒದಗಿಸುವ ಮೇಲ್ಚಾವಣಿ, ಕುಳಿತಿಕೊಳ್ಳುವ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತದೆ. 2 ಹಂತದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ 4 ಪಥದ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು' ಎಂದು ಸಿದ್ದರಾಮಯ್ಯ ಹೇಳಿದರು.
ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಹಕಾರ ಹಾಗೂ ಸಕ್ಕರೆ ಸಚಿವ ಎಚ್.ಎಸ್. ಮಹದೇವಪ್ರಸಾದ್, ಅಬಕಾರಿ ಹಾಗೂ ಮುಜರಾಯಿ ಸಚಿವ ಮನೋಹರ್ ಹೆಚ್. ತಹಶೀಲ್ದಾರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.