ಮೈಸೂರಲ್ಲಿ ಕಾವೇರಿ ನೀರು ಬಿಡದಂತೆ ಪ್ರತಿಭಟನೆ
ಮೈಸೂರು, ಸೆಪ್ಟೆಂಬರ್ 23: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಂತೆ ಆಗ್ರಹಿಸಿ ಮತ್ತು ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು. ಪ್ರಯಾಣಿಕ ಆಟೋ ಚಾಲಕರ ಸಮಿತಿ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ನಡೆಸಿ, ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿತು.
50 ವರ್ಷಗಳಿಂದ ನೀರಿನ ಸಮಸ್ಯೆಗಳಿದ್ದು, ಶಾಶ್ವತ ಪರಿಹಾರ ಕಲ್ಪಿಸಬೇಕು. ಕಾವೇರಿ ನಿರ್ವಹಣಾ ಮಂಡಳಿಯನ್ನು ರದ್ದುಗೊಳಿಸಿ, ಕಾವೇರಿ ಜಲಾನಯನ ಪ್ರದೇಶದ ಹೂಳೆತ್ತುವಂತೆ ಒತ್ತಾಯಿಸಿದರು.
ಕೋಟೆ ಆಂಜನೇಯ ಸ್ವಾಮಿ ಗನ್ ಹೌಸ್ ರಸ್ತೆ, ಹುಣಸೂರು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರೈತರಿಗೆ ಬೆಳೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪಾಲಿಕೆ
ಸದಸ್ಯರ
ಪ್ರತಿಭಟನೆ
ಮೈಸೂರು
ಮಹಾನಗರ
ಪಾಲಿಕೆ
ಸದಸ್ಯರು
ಕಪ್ಪು
ಪಟ್ಟಿ
ಧರಿಸಿ,
ಮೇಯರ್
ಬಿ.ಎಲ್.
ಭೈರಪ್ಪ
ನೇತೃತ್ವದಲ್ಲಿ
ನಗರದ
ಕೋಟೆ
ಆಂಜನೇಯಸ್ವಾಮಿ
ದೇವಸ್ಥಾನದಿಂದ
ಜಿಲ್ಲಾಧಿಕಾರಿ
ಕಚೇರಿವರೆಗೆ
ಮೌನ
ಮೆರವಣಿಗೆ
ನಡೆಸಿದರು.
ಮೆರವಣಿಗೆಯು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟು ದೊಡ್ಡ ಗಡಿಯಾರ, ಗಾಂಧಿವೃತ್ತ, ಚಿಕ್ಕ ಗಡಿಯಾರ, ದೇವರಾಜ ಅರಸು ರಸ್ತೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ, ಧರಣಿ ಅಂತ್ಯಗೊಳಿಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ಮನವಿ ಅರ್ಪಿಸಿದರು.
ಬೀದಿನಾಟಕ
ಪ್ರದರ್ಶನ
ಬಹುಜನ
ವಿದ್ಯಾರ್ಥಿ
ಸಂಘದ
ಸದಸ್ಯರು
ನಗರದಲ್ಲಿ
ಬೀದಿ
ನಾಟಕ
ಪ್ರದರ್ಶಿಸಿ
ತಮಿಳುನಾಡಿಗೆ
ನೀರು
ಹರಿಸುವುದನ್ನು
ವಿರೋಧಿಸಿದರು.
ಪ್ರಧಾನಮಂತ್ರಿ
ದೇಶ
ಸುತ್ತುವ
ಬದಲಿಗೆ
ರಾಜ್ಯಗಳ
ಸಮಸ್ಯೆ
ಬಗೆಹರಿಸಲು
ಮುಂದಾಗಬೇಕು.
ರಾಜ್ಯದ
ಎಲ್ಲ
ಸಂಸದರೂ
ಪಕ್ಷ
ಭೇದ
ಮರೆತು
ಕೇಂದ್ರದ
ಮೇಲೆ
ಒತ್ತಡ
ತಂದು,
ಸಮಸ್ಯೆ
ಬಗೆಹರಿಸಲು
ಕ್ರಮಕೈಗೊಳ್ಳಬೇಕು
ಎಂದು
ಆಗ್ರಹಿಸಿದರು.