ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿಯಿಂದ ಬರುತ್ತಿದ್ದ ಕಾರು ಸೀದಾ ಮನೆಯೊಳಗೇ ನುಗ್ಗಿತು

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 6 : ರಸ್ತೆ ದಾಟುವಾಗ ಹುಷಾರು, ಫುಟ್ ಪಾತ್ ಮೇಲೆ ನಡೆದಾಡುವಾಗ ಜೋಪಾನ... ಇಂಥ ಮಾತುಗಳನ್ನೆಲ್ಲ ಕೇಳಿರ್ತೀರಿ. ಈ ಸುದ್ದಿ ಓದಿದ ಮೇಲೆ ಹೊಸದಾಗಿ ಮತ್ತೊಂದು ಎಚ್ಚರಿಕೆ ಮಾತನ್ನೂ ಸೇರಿಸಿಕೊಳ್ಳ ಬೇಕಾಗಬಹುದು. ಏನದು ಸುದ್ದಿ ಅಂತೀರಾ?

ಅಡ್ಡಾದಿಡ್ಡಿ ವಾಹನ ಚಲಾಯಿಸಿದ ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ಮನೆಯೊಳಗೇ ನುಗ್ಗಿದ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಸಂಭವಿಸಿದೆ. ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ ಈ ಘಟನೆ ಸಂಭವಿಸಿದೆ.

ಕಾರು-ಕ್ಯಾಂಟರ್ ಡಿಕ್ಕಿ: ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳ ಸಾವುಕಾರು-ಕ್ಯಾಂಟರ್ ಡಿಕ್ಕಿ: ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳ ಸಾವು

ಮಡಿಕೇರಿ ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ವೀರಭದ್ರಶೆಟ್ಟಿ ಎಂಬುವವರಿಗೆ ಸೇರಿದ ಮನೆಯೊಳಗೆ ನುಗ್ಗಿದೆ. ಈ ವೇಳೆ ಮನೆಯ ಮುಂಭಾಗ ಜಖಂಗೊಂಡಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಕಾರಿನಲ್ಲಿದ್ದ ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Car rushed in to house in Piriyapatna taluk

ಇಪ್ಪತ್ನಾಲ್ಕು ವರ್ಷದ ಗೃಹಿಣಿ ಆತ್ಮಹತ್ಯೆ
ಮೈಸೂರು ತಾಲೂಕಿನ ಡಿ.ಕಾಟೂರು ನಿವಾಸಿ ಮಹದೇವಮ್ಮ (24) ಎಂಬುವವರು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ತಾಲೂಕಿನ ಕುದೇರು ಸಮೀಪದ ಗಣಿಗನೂರು ಗ್ರಾಮದ ಮಹದೇವಮ್ಮ 2 ವರ್ಷಗಳ ಹಿಂದೆಯಷ್ಟೇ ಡಿ.ಸಾಲುಂಡಿ ನಿವಾಸಿ ಶಂಕರ ಅವರನ್ನು ವಿವಾಹವಾಗಿದ್ದರು.

ಮದುವೆ ಆದಾಗಿನಿಂದ ಪತಿಯು ನಿರಂತರವಾಗಿ ಕಿರುಕುಳ ನೀಡುತ್ತಿದ್ದರಿಂದ ಮಹದೇವಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪತಿ ಶಂಕರ್ ವಿರುದ್ಧ ಮಹದೇವಮ್ಮ ಅವರ ದೊಡ್ಡಪ್ಪ ದೂರು ದಾಖಲಿಸಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
After car lost the control of driver rushed in to house in Kampalapura, Piriyapatna taluk, Mysuru district. Who were traveling in the car injured and shift them to nearest hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X