ಮೈಸೂರಿನ ನೂತನ ಅಪರ ಜಿಲ್ಲಾಧಿಕಾರಿಯಾಗಿ ಬಿ.ಆರ್.ಪೂರ್ಣಿಮಾ ಅಧಿಕಾರ ಸ್ವೀಕಾರ
ಮೈಸೂರು, ಜನವರಿ 18: ಮೈಸೂರಿನ ನೂತನ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ದಂಡಾಧಿಕಾರಿಯಾಗಿ ಬಿ.ಆರ್.ಪೂರ್ಣಿಮಾ ಅಧಿಕಾರ ಸ್ವೀಕರಿಸಿದರು.
ಸರ್ಕಾರಿ ಶಾಲೆಯೇ ಸಾಕು: ಮಾದರಿಯಾದರು ಈ ಮಹಿಳಾ ಜಿಲ್ಲಾಧಿಕಾರಿ
ಬಿ. ಆರ್ .ಪೂರ್ಣಿಮಾರವರು ನಿರ್ಗಮಿತ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ ಅವರಿಂದ ಅಧಿಕಾರ ಸ್ವೀಕರಿಸಿದರು. ಇವರೊಂದಿಗೆ ಬಾಗಲ ಕೋಟೆ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಅವರನ್ನು ಬೆಳಗಾವಿ ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ, ಬಾಗಲಕೋಟೆ ಜಿಪಂ ಉಪ ಕಾರ್ಯದರ್ಶಿ ದುರಗೇಶ್ ರನ್ನು ಬಾಗಲಕೋಟೆ ಅಪರ ಜಿಲ್ಲಾಧಿಕಾರಿಯಾಗಿ, ಕೃಷ್ಣ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ರಾಜಶೇಖರ ಡಂಬಳ ಅವರನ್ನು ಲಿಂಗಸಗೂರು ಉಪ ವಿಭಾಗಾಧಿಕಾರಿಯಾಗಿಯಾಗಿ, ಆ ಸ್ಥಾನದಲ್ಲಿದ್ದ ಎಂ.ಪಿ.ಮಾರುತಿ ಅವರನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರಧಾನ ವ್ಯವ ಸ್ಥಾಪಕರಾಗಿ ವರ್ಗಾವಣೆ ಮಾಡಿ, ರಾಜ್ಯ ಸರ್ಕಾರ ಆದೇಶಿಸಿದೆ.
ಈ ಮೊದಲು ಪೂರ್ಣಿಮಾ ಅವರು ಹಾಸನ, ಮಂಡ್ಯದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿ ನಿವಾಸಿಯಾಗಿದ್ದು, ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರ ಸೋದರಿಯಾಗಿದ್ದಾರೆ.