ಯುವ ದಸರಾದಲ್ಲಿ ಅರ್ಮಾನ್ ಮಲ್ಲಿಕ್ ಹಾಡಿಗೆ ಹುಚ್ಚೆದ್ದು ಕುಣಿದ ಪಡ್ಡೆಹೈಕ್ಳು
ಮೈಸೂರು, ಅಕ್ಟೋಬರ್. 15: ಭಾನುವಾರ ನಿಲ್ಲದ ಮಳೆ ಅಬ್ಬರಕ್ಕೆ ಯುವ ಸಮೂಹ ಜಗ್ಗಲಿಲ್ಲ. ಬದಲಾಗಿ ನೃತ್ಯ ಮಾಡಿ ಕುಣಿದು ಕುಪ್ಪಳಿಸಿದರು.ಹೌದು, ಯುವ ದಸರಾದ ಮೂರನೇ ದಿನ ಎಲ್ಲೆಲ್ಲೂ ಸಂಗೀತದ ಝೇಂಕಾರ.
ಮಹಾರಾಜ ಕಾಲೇಜು ಮೈದಾನದಲ್ಲಿ ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಅವರ ಗಾಯನ ಹಾಗೂ ನೃತ್ಯದ ಮೋಡಿಗೆ ಫಿದಾ ಆದವರೇ ಇಲ್ಲ. ಯುವ ದಸರಾ ವೇದಿಕೆ ಏರಿದ ಅರ್ಮಾನ್ ಮಲ್ಲಿಕ್ 'ನಮ್ಮ ಮೈಸೂರು, ಹೇಗಿದ್ದೀರಾ'?...ಎಂದು ಹುಮ್ಮಸ್ಸಿನಲ್ಲಿ ಸಂಗೀತ ಆರಂಭಿಸಿದರು.
ಮೊದಲಿಗೆ ಜಾ ಹೋ ಮುಷ್ಕರನಾ ಹೈ' ಗೀತೆ ಹಾಡಿದರು. ಬಸು ತೇರಾ, ಬಸು ಬನ್ಜೂ ತೇರಾ ಸಬ್ ತೇರಾ' ಗೀತೆಯನ್ನು ಹಾಡುತ್ತ ಯುವಕರತ್ತ ಮೈಕ್ ತೋರಿಸಿ ಹಾಡಿಗೆ ಧ್ವನಿ ಗೂಡಿಸುವಂತೆ ಹೇಳುತ್ತಿದ್ದಂತೆ ಮಳೆಯ ಅಬ್ಬರಕ್ಕೂ ಸೆಡ್ಡು ಹೊಡೆಯುವಂತೆ ಯುವಕರಿಂದ ಗಾಯನ ಕೇಳಿ ಬಂತು.
ಕನ್ನಡದ ಚೌಕ ಬಾರ' ಸಿನಿಮಾದ ಅಪ್ಪ.. ಐ ಲವ್ ಯೂ ಪ...ಎಂದು ಹಾಡಿದ ಅನುರಾಧ ಭಟ್ ಹಾಡಿಗೆ ಮನಸೋಲದವರಿಲ್ಲ. ನಿಂತಲ್ಲಿಯೇ ಹಾಡಿನ ಸಾಲಿಗಳಿಗೆ ಗುನುಗಿದರು. ಅರ್ಮಾನ್ ಮಲ್ಲಿಕ್ ಹಾಗೂ ಅನುರಾಧ ಭಟ್ ಜೊತೆಗೂಡಿ ಹಾಡಿದ ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ....ಹಾಡುವ ಮೂಲಕ ವೇದಿಕೆಯಲ್ಲಿ ಸಂಗೀತದ ಮಳೆಯನ್ನೇ ಸುರಿದರು.
ಮೈಸೂರು ದಸರಾ: ವಿಜಯ್ ಪ್ರಕಾಶ್ ಹಾಡು, ಸ್ವರ್ಗ ಧರೆಗಿಳಿಸಿದ ರಾಗಿಣಿ
'ನೋಡವಳಂದಾವ.. ಮುದ್ದಿನ ಮಾಲೆ ಚಂದಾವ..', ಮೆನ್ ಹೂನ್ ಹೀರೊ ತೆರಾ..', 'ಕುಚ್ ಬಿ ನಹಿ ಏ ಜಹಾ..' 'ಸಬ್ ತೆರಾ.. ಬೋಲ್ ದೊ ನ ಝರಾ' ಹಾಡುಗಳಿಗೆ ಚಪ್ಪಾಳೆ, ಶಿಳ್ಳೆಗಳು ಕೇಳಿಬಂದವು. ಯುವ ಸ್ಕೂಲ್ ಆಫ್ ಡಾನ್ಸ್ ತಂಡದವರು ಹೂವಿನ ಲೋಕವೇ ಇಲ್ಲಿ ಗೆಳತಿಯರಲ್ಲಿವೇ', 'ಹಾಡು ಸಂತೋಷಕ್ಕೆ...' ಗಾಯನಕ್ಕೆ ನೃತ್ಯ ಮಾಡಿದರು.
ವಿಜಯ್ ಪ್ರಕಾಶ್ ಹಾಡಿಗೆ ಭಾವುಕರಾಗಿ ಕಣ್ಣೀರು ಹಾಕಿದ ಕುಮಾರಸ್ವಾಮಿ
ಯುಎಸ್ಎ ತಂಡ ವಾರೆ ನೋಟ ನೋಡ್ತಯ್ತೆ...ಕೆಜ್ ಡ್ಯಾನ್ಸ್ ಅಕಾಡೆಮಿಯಿಂದ ರಿದ್ದಿ ಸಿದ್ದಿ ವೃದ್ಧಿ ಹೋತಿ' ಹಾಡಿನ ಮೂಲಕ ಭಕ್ತಿಯ ಸುಧೆ ಹರಿಸಿದರು. ಕೆಎಸ್ ಐಸಿ ಮೈಸೂರು ಪ್ರಾಯೋಜಿತದಿಂದ ಮೈಸೂರು ಸಿಲ್ಕ್ ದಿರಿಸಿನಲ್ಲಿ ಮಾರ್ಜಲದ ನಡಿಗೆ ಮೂಲಕ 22ಕ್ಕೂ ಹೆಚ್ಚು ಮಾಡೆಲ್ ಗಳು ವಯ್ಯಾರ ಪ್ರದರ್ಶಿಸಿದರು.