ದಸರಾ ಮೆರವಣಿಗೆ ಗಣನಾಯಕನಾಗಿ ಅರ್ಜುನ್ ಮರುನೇಮಕ
ಮೈಸೂರು, ಜೂ.23 : ಈ ಬಾರಿಯ ಮೈಸೂರು ದಸರಾದಲ್ಲಿಯೂ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿ ಅರ್ಜುನನ ಹೆಗಲೇರಿದೆ. ಅಕ್ಟೋಬರ್ನಲ್ಲಿ ದಸರಾ ನಡೆಯಲಿದ್ದು, ಆಗಸ್ಟ್ ಕೊನೆಯವಾರದಲ್ಲಿ ಗಜಪಡೆ ಮೈಸೂರಿಗೆ ಆಗಮಿಸಲಿವೆ.
ಮೈಸೂರಿನ
ಮುಖ್ಯ
ಅರಣ್ಯ
ಸಂರಕ್ಷಣಾಧಿಕಾರಿ
ಬಿ.ಎಂ.ಪರಮೇಶ್ವರ್
ಅವರ
ಅಧ್ಯಕ್ಷತೆಯಲ್ಲಿ
ಸೋಮವಾರ
ನಡೆದ
ಸಭೆಯಲ್ಲಿ
ಕಳೆದ
ವರ್ಷದಂತೆ
ಈ
ಬಾರಿಯ
ದಸರಾಕ್ಕೂ
14
ಆನೆಗಳನ್ನು
ಕರೆತರಲು
ನಿರ್ಧರಿಸಲಾಗಿದೆ.
ಅರ್ಜುನ
ಗಜಪಡೆಯ
ನೇತೃತ್ವ
ವಹಿಸಲಿದ್ದು,
750
ಕೆಜಿ
ತೂಕದ
ಚಿನ್ನದ
ಅಂಬಾರಿ
ಹೊರಲಿದ್ದಾನೆ.
[ಮೈಸೂರು
ಜಂಬೂ
ಸವಾರಿ
ಆನೆಗಳ
ಬಯೋಡೇಟಾ]
ಈ ಬಾರಿಯ ದಸರಾಗೆ ಬಲರಾಮ, ಅಭಿಮನ್ಯು, ಪ್ರಶಾಂತ, ಗೋಪಾಲಸ್ವಾಮಿ, ವಿಕ್ರಮ, ಕಾವೇರಿ, ದುರ್ಗಾ ಪರಮೇಶ್ವರಿ ಆನೆಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಜುಲೈನಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲಾ 14 ಆನೆಗಳ ಹೆಸರುಗಳನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ. [ಗಜಪಡೆಗಳ ಕಾಳಗಕ್ಕೆ ಸಾಕ್ಷಿಯಾದ ಪಿರಿಯಾಪಟ್ಟಣ]
'ಅಕ್ಟೋಬರ್ ತಿಂಗಳಿನಲ್ಲಿ ದಸರಾ ನಡೆಯಲಿದ್ದು, ಆಗಸ್ಟ್ ಕೊನೆ ವಾರ ಅಥವ ಸೆಪ್ಟೆಂಬರ್ ಮೊದಲ ವಾರದಲ್ಲಿ ಆನೆಗಳ ಮೊದಲ ತಂದ ಮೈಸೂರಿಗೆ ಆಗಮಿಸಲಿದೆ. ಮುಂದಿನ ತಿಂಗಳು ಇನ್ನೊಂದು ಸುತ್ತಿನ ಸಭೆ ನಡೆಸಿ ಆನೆಗಳ ಪಟ್ಟಿ ಅಂತಿಮಗೊಳಿಸುತ್ತೇವೆ' ಎಂದು ಬಿ.ಎಂ.ಪರಮೇಶ್ವರ್ ಹೇಳಿದ್ದಾರೆ. [ಜಂಬೂ ಸವಾರಿಯ ಆನೆ 'ಕಾಂತಿ' ಇನ್ನು ನೆನಪು ಮಾತ್ರ]
ಯಾರು ಅರ್ಜುನ? : ಅರ್ಜುನ (55) ಬಳ್ಳೆ ಆನೆ ಶಿಬಿರದ ಗಂಡು ಆನೆ. 1968 ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದ ಆನೆಗೆ ಅರ್ಜುನ ಎಂದು ನಾಮಕಾರಣ ಮಾಡಲಾಗಿದೆ. 2012ರಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.