ಬೆಂಗಳೂರು-ಮೈಸೂರು ನಡುವೆ ವಿಮಾನ ಹಾರಾಟ ಆರಂಭ
ಮೈಸೂರು, ಸೆಪ್ಟೆಂಬರ್, 03 : ಅಲೆಯನ್ಸ್ ಏರ್ ಬೆಂಗಳೂರು-ಮೈಸೂರು ನಡುವೆ ವಿಮಾನ ಯಾನ ಸೇವೆಯನ್ನು ಗುರುವಾರ ಆರಂಭಿಸಿದೆ. ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಬೆಂಗಳೂರು-ಮೈಸೂರು ನಡುವೆ ವಿಮಾನ ಹಾರಾಟ ನಡೆಸಲಿದೆ.
ಗುರುವಾರ
ಬೆಳಗ್ಗೆ
6
ಗಂಟೆಗೆ
ಬೆಂಗಳೂರಿನ
ಕೆಂಪೇಗೌಡ
ಅಂತರಾಷ್ಟ್ರೀಯ
ವಿಮಾನ
ನಿಲ್ದಾಣದಿಂದ
ಹೊರಟ
ವಿಮಾನ
6.40ಕ್ಕೆ
ಮೈಸೂರಿನ
ಮಂಡಕಳ್ಳಿ
ವಿಮಾನ
ನಿಲ್ದಾಣಕ್ಕೆ
ಬಂದಿಳಿಯಿತು.
ಮೈಸೂರಿನಿಂದ
7
ಗಂಟೆಗೆ
ಹೊರಟ
ವಿಮಾನ
ಬೆಂಗಳೂರಿಗೆ
7.40ಕ್ಕೆ
ತಲುಪಿತು.
[ಟಿಕೆಟ್
ಬುಕ್
ಮಾಡಲು
ವಿಳಾಸ]
ಮೈಸೂರಿಗೆ ಬಂದಳಿದ 72 ಸೀಟಿನ ಮೊದಲ ವಿಮಾನದಲ್ಲಿ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಸೇರಿದಂತೆ 15 ಪ್ರಯಾಣಿಕರು ಆಗಮಿಸಿದರು.
2014ರ
ಸೆಪ್ಟೆಂಬರ್
5ರಂದು
ಸ್ಪೈಸ್
ಜೆಟ್
ಮೈಸೂರಿಗೆ
ವಿಮಾನ
ಹಾರಾಟ
ಸ್ಥಗಿತಗೊಳಿಸಿತ್ತು.
ಸುಮಾರು
ಒಂದು
ವರ್ಷದ
ಬಳಿಕ
ಏರ್
ಇಂಡಿಯಾದ
ಏರ್
ಅಲೆಯನ್ಸ್
ವಿಮಾನ
ಪುನಃ
ಮೈಸೂರು-ಬೆಂಗಳೂರನ್ನು
ಬೆಸೆದಿದೆ.
ವೇಳಾಪಟ್ಟಿ : ಬೆಂಗಳೂರು-ಮೈಸೂರು ನಡುವಿನ ವಿಮಾನವು ಬೆಳಗ್ಗೆ 6ಗಂಟೆಗೆ ಬೆಂಗಳೂರಿನಿಂದ ಹೊರಡಲಿದ್ದು, 6.40ಕ್ಕೆ ಮೈಸೂರಿಗೆ ತಲುಪಲಿದೆ. ಮೈಸೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಡಲಿರುವ ವಿಮಾನ 7.40ಕ್ಕೆ ಬೆಂಗಳೂರಿಗೆ ತಲುಪಲಿದೆ. ಭಾನುವಾರ ಹೊರತುಪಡಿಸಿ ವಾರದ ಆರು ದಿನ ಈ ವಿಮಾನ ಹಾರಾಟ ನಡೆಸಲಿದೆ.