ಮೈಸೂರು ಅರಮನೆಗೆ ಆದ್ಯವೀರ್ ಒಡೆಯರ್ ಆಗಮನ
ಮೈಸೂರು, ಮಾರ್ಚ್ 2 : ರಾಜವಂಶದ ಕುಡಿ ಆದ್ಯವೀರ್ ಜೊತೆ ಇಂದು ಬೆಳಿಗ್ಗೆ ಮೈಸೂರಿಗೆ ಯದುವೀರ್ ದಂಪತಿ ಆಗಮಿಸಿದ್ದಾರೆ. ತ್ರಿಷಿಕಾ ಹಾಗೂ ಯದುವೀರ್ ಆಗಮನದಿಂದ ಇಡೀ ಅರಮನೆಯೇ ಸಂಭ್ರಮದಲ್ಲಿ ತುಂಬಿ ತುಳುಕುತಿತ್ತು.
ಮೈಸೂರು ಯುವರಾಜನಿಗೆ ಆದ್ಯವೀರ್ ಎಂದು ನಾಮಕರಣ
ಕಳೆದ ಫೆ. 25ರಂದು ಬೆಂಗಳೂರು ಅರಮನೆಯಲ್ಲಿ ಯದುವೀರ್ ಪುತ್ರನಿಗೆ ನಾಮಕರಣ ಕಾರ್ಯಕ್ರಮ ನೆರವೇರಿತ್ತು. ಆದ್ಯವೀರ್ ನರಸಿಂಹರಾಜ ಒಡೆಯರ್ ಎಂದು ಮಗುವಿಗೆ ನಾಮಕರಣ ಮಾಡಲಾಗಿತ್ತು. ನಂತರ ಮೈಸೂರು ಅರಮನೆಗೆ ಬಂದ ದಂಪತಿಗೆ ಅರಮನೆಯಲ್ಲಿದ್ದ ಮುತ್ತೈದೆಯರು ಆರತಿ ಬೆಳಗಿ ಸ್ವಾಗತ ಕೋರಿದ್ದಾರೆ. ಆದ್ಯವೀರ್ ನನ್ನು ನೋಡಿ ಅರಮನೆ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
ನಾಮಕರಣದ
ಕುರಿತ
ಗೊಂದಲಕ್ಕೆ
ತೆರೆ:
ಮಗು
ಆದ್ಯವೀರ್
ತುಂಬಾ
ಚೆನ್ನಾಗಿದ್ದಾನೆ.
ನಾಮಕರಣ
ಮುಗಿಸಿ
ಮೈಸೂರಿಗೆ
ಆಗಮಿಸಿದ್ದೇವೆ.
ಬೆಂಗಳೂರಿನಲ್ಲಿ
ನಾಮಕರಣ
ಮಾಡಿದ್ದು
ನಮ್ಮ
ಅನುಕೂಲಕ್ಕಾಗಿ
ಅಷ್ಟೇ.
ಅದನ್ನು
ಹೊರತುಪಡಿಸಿ
ಬೇರೆ
ಯಾವುದೇ
ಉದ್ದೇಶವಿಲ್ಲ
ಎಂದು
ಮೈಸೂರಿನಲ್ಲಿ
ಯದುವೀರ್
ಕೃಷ್ಣದತ್ತ
ಚಾಮರಾಜ
ಒಡೆಯರ್
ಇದೇ
ವೇಳೆ
ಸ್ಪಷ್ಟಪಡಿಸಿದ್ದಾರೆ.
ಶೀಘ್ರವೇ
ಚಾಮುಂಡಿ
ದೇವಿಯ
ದರ್ಶನ:
ಶೀಘ್ರದಲ್ಲೇ
ಚಾಮುಂಡಿ
ಬೆಟ್ಟಕ್ಕೆ
ಹೋಗಲಿದ್ದೇವೆ.
ಆದ್ಯಾ
ಎಂದರೆ
ದುರ್ಗಿ,
ಚಾಮುಂಡಿ
ಎಂದರ್ಥ.
ಮಗುವಿನ
ಒಳಿತಿಗಾಗಿ
ಆ
ಹೆಸರು
ಇಡಲಾಗಿದೆ.
ಎಂದು
ಆದ್ಯಾವೀರ
ಹೆಸರಿನ
ಗುಟ್ಟು
ಬಿಟ್ಟುಕೊಟ್ಟರು.
ಮುಂದಿನ
ಕಾರ್ಯಕ್ರಮಗಳೆಲ್ಲ
ಅಮ್ಮನ
ಸೂಚನೆಯಂತೆ
ನಡೆಯಲಿದೆ
ಎಂದ
ಅವರು,
ಅತ್ತೆ-ಸೊಸೆ
ಸಂಬಂಧ
ಸರಿಯಿಲ್ಲ
ಎಂಬೆಲ್ಲ
ಸಂಶಯಗಳಿಗೆ
ತೆರೆ
ಎಳೆದರು.
ಮೈಸೂರಿಗೆ ಬಂದ ಮುದ್ದು ರಾಜಕುಮಾರ: ಒಂದಷ್ಟು ಚಿತ್ರಗಳು