ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ಬಿಜೆಪಿಯೊಂದಿಗೆ ಸೇರಿಕೊಳ್ಳಿ, ನಾವು ಶಿವಸೇನಾ ಮತ್ತೆ ಕಟ್ಟುತ್ತೇವೆ: ರಾವತ್‌

|
Google Oneindia Kannada News

ಮುಂಬೈ, ಜೂ.23: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿಷ್ಠಾವಂತ ಮತ್ತು ಶಿವಸೇನೆ ಸಂಸದ ಸಂಜಯ್ ರಾವತ್ ಗುರುವಾರ ಏಕನಾಥ್ ಶಿಂಧೆ ನೇತೃತ್ವದ ಪಕ್ಷದ ಬಂಡಾಯ ಪಾಳಯಕ್ಕೆ ನೀವು ಬಿಜೆಪಿಯೊಂದಿಗೆ ಸೇರಿಕೊಳ್ಳಿ ಆದರೆ ನಾವೂ ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ ಎಂದು ಹೇಳಿದ್ದಾರೆ.

ಸಂಜಯ್‌ ರಾವತ್‌ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಗೆ ಸವಾಲು ಹಾಕಿದರು. ಈ ವೇಳೆ ಬಂಡಾಯ ಶಾಸಕರು ಸೇನೆಗೆ ಮರಳುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದರು. ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ಶಿವಸೇನೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಒಡೆಯಬೇಕು ಎಂಬ ಏಕನಾಥ್‌ ಶಿಂಧೆ ಅವರ ಬೇಡಿಕೆಗೆ ಸಂಸದ ರಾವತ್‌ ನೀವು (ಬಂಡಾಯಗಾರರು) ಬಿಜೆಪಿಯೊಂದಿಗೆ ವಿಲೀನಗೊಳ್ಳಿ, ನಾವು ಶಿವಸೇನೆಯಲ್ಲೇ ನಮ್ಮ ಪಕ್ಷವಾಗಿಯೇ ಉಳಿಯುತ್ತೇವೆ ಎಂದು ಹೇಳಿದರು.

ಮಹಾ' ರಾಜಕೀಯ ಬಿಕ್ಕಟ್ಟು: ನಿಜವಾಯ್ತಾ ಕಂಗನಾ ನುಡಿದ ಭವಿಷ್ಯ?ಮಹಾ' ರಾಜಕೀಯ ಬಿಕ್ಕಟ್ಟು: ನಿಜವಾಯ್ತಾ ಕಂಗನಾ ನುಡಿದ ಭವಿಷ್ಯ?

ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಎದುರಿಸಲಾಗದೆ ಪಕ್ಷವನ್ನು ವಿಭಜಿಸಲು ಬಂಡಾಯ ಪಾಳಯಕ್ಕೆ ಬೇಕಾದ ಸಂಖ್ಯಾಬಲ ಕಲೆಹಾಕುತ್ತಿರುವುದರಿಂದ ಶಿವಸೇನೆ ನೇತೃತ್ವದ ಆಡಳಿತ ಪತನದ ಅಂಚಿನಲ್ಲಿದೆ. ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಉಳಿಯುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಜಯ್‌ ರಾವತ್‌ ಬಂಡಾಯ ಎದ್ದಿರುವ ಎಲ್ಲಾ ಶಾಸಕರು ಸದನದ ಮಹಡಿಗೆ ಬರಲಿ ನಾವು ಮಾತನಾಡುತ್ತೇವೆ ಎಂದು ಹೇಳಿದರು.

ಬಂಡುಕೋರರೊಂದಿಗೆ ಇನ್ನೂ ಮಾತುಕತೆ ನಡೆಯುತ್ತಿದೆಯೇ ಎಂಬ ಬಗ್ಗೆ ರಾವತ್ ಅವರೆಲ್ಲರೂ ನಮ್ಮ ಸ್ನೇಹಿತರು ಅವರ ಬಲವಂತಗಳು ಏನೆಂದು ನಮಗೆ ತಿಳಿದಿಲ್ಲ. ಪಕ್ಷ ಮತ್ತು ರಾಜ್ಯವು ಉದ್ಧವ್ ಠಾಕ್ರೆ ಅವರೊಂದಿಗೆ ಇದೆ. ಕೆಲವು ಶಾಸಕರು ತೊರೆದ ಕಾರಣ ಪಕ್ಷ ಮುಳುಗಿದೆ ಎಂದು ಅರ್ಥವಲ್ಲ ಎಂದರು.

 ನಾವು ಪಕ್ಷವನ್ನು ಮತ್ತೆ ಕಟ್ಟುತ್ತೇವೆ

ನಾವು ಪಕ್ಷವನ್ನು ಮತ್ತೆ ಕಟ್ಟುತ್ತೇವೆ

ನಾವು ಪಕ್ಷವನ್ನು ಮತ್ತೆ ಕಟ್ಟಿದ್ದೇವೆ ಮತ್ತು ಅದನ್ನು ಅಧಿಕಾರಕ್ಕೆ ತಂದಿದ್ದೇವೆ. ಮತ್ತು ಈಗ ಇದು ಉದ್ಧವ್ ಜಿ ಮತ್ತು ನನಗೆ ಮುಕ್ತ ಸವಾಲಿದೆ. ನಾವು ಪಕ್ಷವನ್ನು ಮತ್ತೆ ಕಟ್ಟುತ್ತೇವೆ ಮತ್ತು ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬಾಳಾಸಾಹೇಬ್ ಠಾಕ್ರೆ ಅವರ ಕಾಲದಲ್ಲಿಯೂ ಬಹಳಷ್ಟು ಜನರು ಪಕ್ಷವನ್ನು ತೊರೆದರು ಎಂದು ಅವರು ಉದ್ಧವ್ ಠಾಕ್ರೆ ಅವರ ತಂದೆ, ಪಕ್ಷದ ಸಂಸ್ಥಾಪಕ ಬಾಳ ಠಾಕ್ರೆ ಅವರನ್ನು ಉಲ್ಲೇಖಿಸಿ ಹೇಳಿದರು.

ಸಿಎಂ ಸ್ಥಾನ ಬೇಡ: ಉದ್ಧವ್ ಠಾಕ್ರೆ ಆಫರ್ ತಿರಸ್ಕರಿಸಿದ ಶಿಂದೆಸಿಎಂ ಸ್ಥಾನ ಬೇಡ: ಉದ್ಧವ್ ಠಾಕ್ರೆ ಆಫರ್ ತಿರಸ್ಕರಿಸಿದ ಶಿಂದೆ

 ಶಿಂಧೆ ಪ್ರತಿಯೊಂದು ನಿರ್ಧಾರದ ಭಾಗವಾಗಿದ್ದರು

ಶಿಂಧೆ ಪ್ರತಿಯೊಂದು ನಿರ್ಧಾರದ ಭಾಗವಾಗಿದ್ದರು

ಮುಖ್ಯಮಂತ್ರಿಗಳ ಮನೆ ಪಕ್ಷದ ಶಾಸಕರಿಗೆ ಮುಚ್ಚಿದೆ ಎಂಬ ಏಕನಾಥ್‌ ಶಿಂಧೆ ಆರೋಪಗಳಿಗೆ ಅವರು ಪ್ರತಿಕ್ರಿಯಿಸಿ, ಇವು ಕೇವಲ ನೆಪ ಅಷ್ಟೇ. ಒಂದು ವರ್ಷ ಕೋವಿಡ್ ನಿರ್ಬಂಧಗಳು ಇದ್ದವು. ನಂತರ ಮುಖ್ಯಮಂತ್ರಿ ಠಾಕ್ರೆ ಆರು ತಿಂಗಳ ಕಾಲ ಅಸ್ವಸ್ಥರಾಗಿದ್ದರು ಎಂದು ಹೇಳಿದರು. ಏಕನಾಥ್ ಶಿಂಧೆ ಅವರು ಪಕ್ಷ ಮತ್ತು ಸರ್ಕಾರದ ಪ್ರತಿಯೊಂದು ನಿರ್ಧಾರದ ಭಾಗವಾಗಿದ್ದರು. ಪಕ್ಷ ಮತ್ತು ರಾಜ್ಯ ಸಚಿವ ಸಂಪುಟದಲ್ಲಿ ಅವರಿಗೆ ಪ್ರಮುಖ ಸ್ಥಾನಗಳನ್ನು ನೀಡಲಾಯಿತು. ಆದ್ದರಿಂದ ಅವರು ನಾಯಕರು ಮತ್ತು ಕಾರ್ಯಕರ್ತರನ್ನು ಒಟ್ಟಿಗೆ ಇಡುತ್ತಾರೆ. ಉದ್ಧವ್‌ ಜೀ ಅಥವಾ ಅವರು ಮಾತ್ರ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಇದು ಸಾಮೂಹಿಕ ಜವಾಬ್ದಾರಿಯಾಗಿದೆ. ಅವರ ಕರ್ತವ್ಯವನ್ನು ಮಾಡುವ ಬದಲು ಅವರು ಪಕ್ಷದಲ್ಲಿ ವಿಭಜನೆ ಮಾಡಿದರು ಎಂದರು.

 ಈ ಭೂಮಿ ಶಿವಸೇನೆಗೆ ಸೇರಿದ್ದು

ಈ ಭೂಮಿ ಶಿವಸೇನೆಗೆ ಸೇರಿದ್ದು

ಉದ್ಧವ್‌ ಠಾಕ್ರೆಯವರ ನಿಲುವನ್ನು ಪುನರುಚ್ಚರಿಸುವುದಾಗಿ ಅವರು ಹೇಳಿದರು, ಯಾರು ಪಕ್ಷ ಬಿಡಲು ಬಯಸುತ್ತಾರೆ, ಬಿಡಬಹುದು. ಆದರೆ ಹೋಗಿ ಮತ್ತೆ ಚುನಾವಣೆಯಲ್ಲಿ ನಿಲ್ಲುತ್ತಾರೆ. ಈ ಭೂಮಿ ಶಿವಸೇನೆ ಮತ್ತು ಬಾಳಾಸಾಹೇಬರಿಗೆ ಸೇರಿದ್ದು. ಫೀನಿಕ್ಸ್ ಹಕ್ಕಿಯಂತೆ ಮತ್ತೆ ಮೇಲೆದ್ದು ಮೇಲೇ ಬರುತ್ತೇವೆ. ಕಳೆದ 56 ವರ್ಷಗಳಲ್ಲಿ ನಾವು ಹಲವಾರು ಹೋರಾಟಗಳನ್ನು ನೋಡಿದ್ದೇವೆ. ಆಗಬಹುದಾದ ಕೆಟ್ಟದ್ದೇನು?" ಇಲ್ಲಿ ಇಲ್ಲ ಎಂದು ರಾವತ್‌ ಹೇಳಿದರು.

 ಮಂತ್ರಿ ಸ್ಥಾನಗಳನ್ನು ಕಳೆದುಕೊಳ್ಳುತ್ತೇವೆ

ಮಂತ್ರಿ ಸ್ಥಾನಗಳನ್ನು ಕಳೆದುಕೊಳ್ಳುತ್ತೇವೆ

ಬಹುಶಃ ನಾವು ಸರ್ಕಾರವನ್ನು ಕಳೆದುಕೊಳ್ಳುತ್ತೇವೆ, ಅಧಿಕಾರವನ್ನು ಕಳೆದುಕೊಳ್ಳುತ್ತೇವೆ, ಮಂತ್ರಿ ಸ್ಥಾನಗಳನ್ನು ಕಳೆದುಕೊಳ್ಳುತ್ತೇವೆ. ರಾಜಕೀಯದಲ್ಲಿ ಇನ್ನೇನು ಸಂಭವಿಸಬಹುದು? ನಮ್ಮ ವಿರುದ್ಧ ಇಡಿ (ಜಾರಿ ನಿರ್ದೇಶನಾಲಯ) ಮತ್ತು ಸಿಬಿಐ (ಕೇಂದ್ರ ತನಿಖಾ ದಳ) ದುರ್ಬಳಕೆ ಮಾಡಿಕೊಳ್ಳುತ್ತೀರಿ, ಜೈಲಿಗೆ ಹಾಕುತ್ತೀರಿ... ಇನ್ನೇನು? ನೀವು ನಮ್ಮನ್ನು ಶೂಟ್ ಮಾಡುತ್ತೀರಾ? ನಾವು ಎಲ್ಲವನ್ನೂ ನೋಡಿದ್ದೇವೆ ಮತ್ತು ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಸಂಸದ ಸಂಜಯ್‌ ರಾವುತ್ ಹೇಳಿದರು.

English summary
Shiv Sena MP Sanjay Rawat, loyal to Maharashtra Chief Minister Uddhav Thackeray, said on Thursday that you will join the BJP in the rebellion of the Eknath Shinde-led party but we too will rebuild the Shiv Sena.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X