ಗಲ್ಲಿಗೇರಿಸಲಾದ ಯಾಕೂಬ್ ಅಂತ್ಯಸಂಸ್ಕಾರ ಮುಂಬೈನಲ್ಲಿ
ಮುಂಬೈ, ಜುಲೈ 29 : ನಾಗ್ಪುರ ಜೈಲಿನಲ್ಲಿ ಗಲ್ಲಿಗೇರಿಸಲಾದ ಯಾಕೂಬ್ ಮೆಮನ್ ಅಂತ್ಯ ಸಂಸ್ಕಾರ ಮುಂಬೈನಲ್ಲಿ ನಡೆಯಲಿದೆ. ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗುತ್ತದೆ. ಮುಂಬೈನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಗಲ್ಲಿಗೇರಿಸಿದ
ಬಳಿಕ
ಮರಣೋತ್ತರ
ಪರೀಕ್ಷೆಯನ್ನು
ಜೈಲಿನಲ್ಲಿ
ನಡೆಸಲಾಗಿದ್ದು
ಕುಟುಂಬದವರಿಗೆ
11
ಗಂಟೆಯ
ವೇಳೆಗೆ
ಶವವನ್ನು
ಹಸ್ತಾಂತರ
ಮಾಡಲಾಗುತ್ತದೆ.
ಬಳಿಕ
ಮುಂಬೈನಲ್ಲಿ
ಅಂತ್ಯಕ್ರಿಯೆ
ನಡೆಯಲಿದೆ.
ಮುಂಬೈನಲ್ಲಿರುವ
ಯಾಕೂಬ್
ನಿವಾಸಕ್ಕೂ
ಬಿಗಿ
ಭದ್ರತೆಯನ್ನು
ನೀಡಲಾಗಿದೆ.
[ಯಾಕೂಬ್
ಗಲ್ಲು
ತಡೆಯಲು
ಹೈಡ್ರಾಮ]
ಮೃತದೇಹಕ್ಕಾಗಿ ಮನವಿ : ಯಾಕೂಬ್ ಕುಟುಂಬದವರು ಮೃತದೇಹವನ್ನು ನೀಡುವಂತೆ ಜೈಲಿನ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಯಾಕೂಬ್ ತಂದೆಯ ಅಂತ್ಯ ಸಂಸ್ಕಾರ ಮಾಡಿದ ಮುಂಬೈನ Marine Lines Muslim Cemetryಯಲ್ಲಿಯೇ ಯಾಕೂಬ್ ಅಂತ್ಯಕ್ರಿಯೆಯೂ ನಡೆಯಲಿದೆ. [ನೇಣಿಗೆ ಕೊರಳೊಡ್ಡಿದ ಯಾಕೂಬ್]
ಜೈಲಿನಂದ ಮೃತದೇಹ ಪಡೆದ ನಂತರ ಯಾಕೂಬ್ ನಿವಾಸಕ್ಕೆ ತೆಗೆದುಕೊಂಡು ಹೋಗಿ, ಅಂತಿಮ ವಿಧಿವಿಧಾನಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ. ಈ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ಯಾಕೂಬ್ ನಿವಾಸವಿರುವ ರಸ್ತೆಯಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. [ಮುಂಬೈ ಬಾಂಬ್ ಸ್ಫೋಟದ Timeline]
ಕುಟುಂಬ
ಭರವಸೆ
ನೀಡಿದೆ
:
ಮೃತದೇಹವನ್ನು
ಕುಟುಂಬದವರಿಗೆ
ಹಸ್ತಾಂತರ
ಮಾಡುವ
ಬಗ್ಗೆ
ಜೈಲಿನ
ಅಧಿಕಾರಿಗಳು
ಗೊಂದಲದಲ್ಲಿದ್ದರು.
ಗಲ್ಲುಶಿಕ್ಷೆ
ವಿಧಿಸಿದ
ಕೈದಿಯ
ಅಂತ್ಯ
ಸಂಸ್ಕಾರವನ್ನು
ಜೈಲಿನಲ್ಲಿಯೇ
ಮಾಡುವಂತೆ
ಯಾಕೂಬ್
ಅಂತ್ಯಕ್ರಿಯೆ
ನಡೆಸುತ್ತೇವೆ
ಎಂದು
ಅಧಿಕಾರಿಗಳು
ಹೇಳಿದ್ದರು.
ಕುಟುಂಬ ವರ್ಗದವರು ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡುವುದಿಲ್ಲ ಎಂದು ಭರವಸೆ ನೀಡಿದ ಬಳಿಕ, ನಗರದ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸರೊಂದಿಗೆ ಚರ್ಚೆ ನಡೆಸಿದ ಜೈಲಿನ ಅಧಿಕಾರಿಗಳು ಮೃತದೇಹವನ್ನು ಹಸ್ತಾಂತರ ಮಾಡಲು ಒಪ್ಪಿಗೆ ನೀಡಿದ್ದಾರೆ.