Breaking: ಮಹಾ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಗೆ ಠಾಕ್ರೆ ಟೀಮ್
ಮುಂಬೈ, ಜುಲೈ 08: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅನ್ನು ಆಹ್ವಾನಿಸಿದ ರಾಜ್ಯಪಾಲ ಭಗತ್ ಸಿಂಗ್ ನಿರ್ಧಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದೆ.
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ವಿಶ್ವಾಸಮತಯಾಚನೆಗಾಗಿ ಸೋಮವಾರದ ನಡೆಸಿದ ವಿಧಾನಸಭೆ ಕಲಾಪಗಳನ್ನೂ ಪ್ರಶ್ನಿಸಲಾಗಿದೆ. ಅನರ್ಹತೆ ಪ್ರಕ್ರಿಯೆ ಬಾಕಿಯಿರುವ 16 ಬಂಡಾಯ ಶಾಸಕರು ವಿಧಾನಸಭೆ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಠಾಕ್ರೆ ತಂಡವು ವಾದಿಸಿದೆ.
ಕಳೆದ ಜೂನ್ 28 ರಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸುವಂತೆ ಒತ್ತಾಯಿಸಿದ ಕೆಲವೇ ಗಂಟೆಗಳಲ್ಲಿ ರಾಜ್ಯಪಾಲರು ಆದೇಶ ಹೊರಡಿಸಿದರು. ಇದರಿಂದ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಅಲ್ಪಮತಕ್ಕೆ ಕುಸಿಯುವಂತೆ ಆಯಿತು ಎಂದು ಹೇಳಿಕೊಂಡಿದ್ದಾರೆ.
Recommended Video
ರಾಜ್ಯಪಾಲರ
ನಡೆ
ಬಗ್ಗೆ
ಸಂಜಯ್
ರಾವತ್
ಟೀಕೆ:
ಬಿಜೆಪಿ
ನಾಯಕರು
ಭೇಟಿಯಾದ
ನಂತರಲ್ಲಿ
ರಾಜ್ಯಪಾಲ
ಭಗತ್
ಸಿಂಗ್
ಕೊಶ್ಯಾರಿ
"ರಫೇಲ್ಗಿಂತ
ವೇಗವಾಗಿ
ಜೆಟ್
ವೇಗದಲ್ಲಿ
ಕಾರ್ಯನಿರ್ವಹಿಸಿದರು",
ಎಂದು
ಸಂಜಯ್
ರಾವತ್
ಟೀಕಿಸಿದ್ದಾರೆ.
ಮಹಾರಾಷ್ಟ್ರದಲ್ಲಿ
ಏಕನಾಥ್
ಶಿಂಧೆ
ಸರ್ಕಾರಕ್ಕೆ
ವಿಶ್ವಾಸ:
ಮಹಾರಾಷ್ಟ್ರದಲ್ಲಿ
ಮಾಜಿ
ಮುಖ್ಯಮಂತ್ರಿ
ಉದ್ಧವ್
ಠಾಕ್ರೆ
ಮೈತ್ರಿ
ಸರ್ಕಾರದ
ವಿರುದ್ಧ
ಬಂಡಾಯ
ಬಾವುಟ
ಹಾರಿಸಿದ್ದ
ಸಿಎಂ
ಏಕನಾಥ್
ಶಿಂಧೆ
ತಮ್ಮ
ಗುರಿ
ತಲುಪುವಲ್ಲಿ
ಯಶಸ್ವಿ
ಆಗಿದ್ದಾರೆ.
ಕಳೆದ
ಜೂನ್
4ರ
ಸೋಮವಾರ
ವಿಶ್ವಾಸಮತಯಾಚನೆ
ಪ್ರಕ್ರಿಯೆ
ನಡೆಸಲಾಯಿತು.
ರಾಜ್ಯದಲ್ಲಿ
288
ಸದಸ್ಯ
ಬಲದ
ವಿಧಾನಸಭೆಯಲ್ಲಿ
ಒಬ್ಬ
ಶಾಸಕರು
ಮೃತಪಟ್ಟ
ಹಿನ್ನೆಲೆ
ಸದಸ್ಯರ
ಬಲವನ್ನು
287ಕ್ಕೆ
ಇಳಿಸಲಾಗಿತ್ತು.
ಈ
ಪೈಕಿ
ಬಹುಮತಕ್ಕೆ
144
ಮತಗಳ
ಅಗತ್ಯವಿದ್ದು,
164
ಶಾಸಕರು
ಏಕನಾಥ್
ಶಿಂಧೆ
ನೇತೃತ್ವದ
ಸರ್ಕಾರ
ಮಂಡಿಸಿದ
ವಿಶ್ವಾಸಮತ
ಯಾಚನೆಗೆ
ಪರವಾಗಿ
ಮತ
ಚಲಾಯಿಸಿದರು.
99
ಶಾಸಕರು
ವಿಶ್ವಾಸಮತಯಾಚನೆಗೆ
ವಿರುದ್ಧವಾಗಿ
ಮತ
ಚಲಾಯಿಸಿದ್ದು,
ಆ
ಮೂಲಕ
ಒಟ್ಟು
263
ಶಾಸಕರು
ಮತ
ಚಲಾಯಿಸಿದರು.
ಮೂವರು
ಶಾಸಕರು
ಗೈರಾಗಿದ್ದು,
ಬಹುತೇಕ
ಕಾಂಗ್ರೆಸ್
ಮತ್ತು
ಎನ್ಸಿಪಿಯ
20
ಶಾಸಕರು
ಮತದಾನದ
ವೇಳೆ
ಗೈರು
ಹಾಜರಾಗಿದ್ದರು.